ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರ; ಫೇಕ್ ಫ್ಯಾಕ್ಟರಿಯ ಮಾಲಕರನ್ನು ಶೀಘ್ರದಲ್ಲೇ ಹತ್ತಿಕ್ಕುತ್ತೇವೆ: ಕಾಂಗ್ರೆಸ್‌ ಎಚ್ಚರಿಕೆ

Update: 2023-08-08 09:08 GMT

ಬೆಂಗಳೂರು: ಕೃಷಿ ಸಚಿವರ ವಿರುದ್ಧ ಮಂಡ್ಯ ಜಿಲ್ಲೆಯ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರ ಬರೆದಿರುವವರ ವಿರುದ್ಧ ಶೀಘ್ರ ಕ್ರಮವಾಗಲಿದೆ ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ. 

ಈ ಕುರಿತು ಅಧಿಕಾರಿಗಳ ವೀಡಿಯೊ ಹೇಳಿಕೆಯನ್ನು ಟ್ವೀಟ್‌ ಮಾಡಿರುವ ಯುವ ಕಾಂಗ್ರೆಸ್ @IYCKarnataka, ʼʼಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆನ್ನಲಾದ ಅಧಿಕಾರಿಗಳಿಗೆ ಈ ನಕಲಿ ಪತ್ರದ ಕುರಿತು ಮಾಹಿತಿಯೇ ಇರಲಿಲ್ಲ. ಸಹಿಯೂ ಅವರದ್ದಲ್ಲ, ವಿಳಾಸವೂ ಅವರದ್ದಲ್ಲʼʼ ಎಂದು ಸ್ಪಷ್ಟಪಡಿಸಿದೆ. 

ʼʼಶಾಸಕ ಬಿ. ಆರ್ ಪಾಟೀಲ್ ಅವರ ಹೆಸರಿನ ನಕಲಿ ಪತ್ರದ ನಂತರ ಈಗ ಅಧಿಕಾರಿಗಳ ಹೆಸರಿನ ನಕಲಿ ಪತ್ರ.. ರಾಜ್ಯದಲ್ಲಿ ತಲೆ ಎತ್ತಿರುವ ಫೇಕ್ ಫ್ಯಾಕ್ಟರಿಯ ಮಾಲೀಕರನ್ನು ಶೀಘ್ರದಲ್ಲೇ ಹತ್ತಿಕ್ಕುತ್ತೇವೆʼʼ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. 

‌ʼʼBreaking news' ನ ಕಾಲಘಟ್ಟದಲ್ಲಿ ಆತುರಕ್ಕೆ ಬೀಳದೆ ಮಾಧ್ಯಮಗಳೂ ಸಹ ಸತ್ಯಾಸತ್ಯತೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಜವಾಬ್ದಾರಿಯುತವಾಗಿ ವರದಿ ಮಾಡಬೇಕುʼʼ ಎಂದು ಕಾಂಗ್ರೆಸ್‌ ಮನವಿ ಮಾಡಿಕೊಂಡಿದೆ. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News