ಬಿಜೆಪಿ ಸಂಸದ ಸುಧಾಕರ್ ಅಭಿನಂದನಾ ಸಮಾರಂಭದಲ್ಲಿ ಅಪ್ರಾಪ್ತರಿಗೂ ಮದ್ಯ?

Update: 2024-07-08 09:36 GMT

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಸಂಸದ ಡಾ.ಕೆ. ಸುಧಾಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಉಚಿತವಾಗಿ ಮದ್ಯ ನೀಡಲಾಗಿದ್ದು, ಈ ವೇಳೆ ಅಪ್ರಾಪ್ತ ಬಾಲಕರು ತೆಗೆದುಕೊಂಡು ಸೇವನೆ ಮಾಡಿರುವ ಆರೋಪ ಕೇಳಿಬಂದಿದೆ.

ರವಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಿದ್ದು, ಬಾಡೂಟ ಹಾಗೂ ಮದ್ಯವನ್ನು ಕೂಡ ಹಂಚಲಾಗಿದೆ. ಈ ಸಂಬಂಧ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಬಿಯರ್ ಬಾಟಲಿ ಸೇರಿದಂತೆ ಇನ್ನಿತರ ಮಾದರಿಯ ಮದ್ಯವನ್ನು ಉಚಿತವಾಗಿ ಹಂಚಿಕೆ ಮಾಡಲಾಗಿದೆ. ಈ ವೇಳೆ ಮದ್ಯದ ಬಾಟಲ್‌ಗಾಗಿ ಜನರು ಮುಗಿಬಿದಿದ್ದು, ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇನ್ನೂ, ಕೆಲ ಮಂದಿ ಬಿಯರ್ ಪಡೆದಿದ್ದು, ಈ ವೇಳೆ ಅಪ್ರಾಪ್ತರು ಅವರಿಂದ ಪಡೆದುಕೊಂಡು ಸಮೀಪದ ಮೈದಾನದಲ್ಲಿ ಸೇವನೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಿ, ‘ಮದ್ಯ ಹಂಚಿಕೆಗೆ ಪರವಾನಿಗೆ ಪಡೆಯಲಾಗಿದೆ. ಹಾಗಾಗಿ, ನಾವು ಏನು ಮಾಡಲು ಸಾಧ್ಯವಿಲ್ಲ’ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News