ರಾಜಕೀಯ ಭಿನ್ನಮತ ದೂರವಿಟ್ಟು ಮೋದಿಗೆ ಬೆಂಬಲ ಕೊಡಿ: ಜೆಡಿಎಸ್ ಗೆ ಶೋಭಾ ಕರಂದ್ಲಾಜೆ ಮನವಿ

Update: 2023-07-15 10:41 GMT

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗ ಬೇಕು. ಭಾರತಕ್ಕೆ ಎದ್ದು ನಿಂತು ಗೌರವ ನೀಡುತ್ತಿರುವುದು ಪ್ರಧಾನಿ ಮೋದಿ ಅವರ ಕಾರಣಕ್ಕೆ. ನರೇಂದ್ರ ಮೋದಿ ಅವರಿಗೆ ದೇಶದ ಜನರ , ಧರ್ಮಗಳ ರಾಜಕೀಯ ವ್ಯವಸ್ಥೆ ರಾಜಕೀಯ ಭಿನ್ನ ಮತಗಳನ್ನ ದೂರವಿಟ್ಟು ಬೆಂಬಲ ಕೊಡಬೇಕು. ಅನೇಕ ಪಕ್ಷಗಳು ಬೆಂಬಲಿಸುತ್ತಿದ್ದು, ಜೆಡಿಎಸ್​ನಿಂದಲೂ ನಾವು ನಿರೀಕ್ಷೆ ಮಾಡುತ್ತೇವೆ'' ಎಂದು ಹೇಳಿದರು. 

''ದೇಶದಲ್ಲಿರುವ ರಾಜಕೀಯ ಪಾರ್ಟಿಗಳು ಪ್ರಧಾನಿ ಮೋದಿ ಜೊತೆ ಜೋಡಣೆ ಆಗುತ್ತಿದೆ. ಭಾರತ ನೂರನೇ ವರ್ಷದ ಸಂಭ್ರಮಾಚರಣೆಯ ದಿನ ವಿಶ್ವದಲ್ಲೇ ನಂಬರ್ ಓನ್ ಆಗಿರಬೇಕು ಎಂಬುದು ಮೋದಿ ಅವರ ಆಸೆ. ದೇಶದ ಉನ್ನತಿ ಬಗ್ಗೆ ಯೋಚಿಸುವ ರಾಜಕೀಯ ಪಕ್ಷಗಳು ಮೋದಿ ಜೊತೆಗೆ ಜೋಡಣೆ ಆಗುತ್ತಿದೆ. ರಾಜಕೀಯ ಪಕ್ಷಗಳು ಜೋಡಣೆ ಆಗಬೇಕು ಎಂಬ ಆಗ್ರಹ ಕೂಡ ಇದೆ'' ಎಂದರು. 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News