ಮಂಗಳೂರು: ಧಾರಾಕಾರ ಮಳೆಗೆ ಧರಾಶಾಹಿಯಾದ ಬೃಹತ್ ಮರ

Update: 2023-07-23 06:01 GMT

ಮಂಗಳೂರು: ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೃಹದಾಕಾರದ ಮರವೊಂದು ಬುಡ ಸಮೇತ ನೆಲಕ್ಕುರುಳಿದ ಘಟನೆ ಲೇಡಿಹಿಲ್ ಸರ್ಕಲ್ ಬಳಿ ನಡೆದಿರುವ ಬಗ್ಗೆ ವರದಿಯಾಗಿದೆ.

ಘಟನೆಯ ವೇಳೆ ಸ್ಕೂಟರ್ ಸವಾರರಿಬ್ಬರು ಆ ದಾರಿಯಾಗಿ ಹಾದು ಬರುತ್ತಿದ್ದು, ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದಿರುವುದರಿಂದ ವಾಹನಗಳ ಓಡಾಟಕ್ಕೆ ತೊಡಕುಂಟಾಗಿದ್ದು, ಏಕಮುಖ ಸಂಚಾರ ರಸ್ತೆ ಬಂದ್ ಆಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News