ಅಂದರ್ ಬಾಹರ್ ಪ್ರತ್ಯೇಕ ಪ್ರಕರಣ: 21 ಮಂದಿ ಬಂಧನ

Update: 2023-12-13 17:41 GMT

ಉಡುಪಿ: ನಗರದ ಕರಾವಳಿ ಬೈಪಾಸ್‌ನ ಶಾರದಾ ಹೊಟೇಲಿನ ಹಿಂಬದಿಯ ಗದ್ದೆಯಲ್ಲಿ ಡಿ.12ರಂದು ಸಂಜೆ ವೇಳೆ ಅಂದರ್- ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಕುಂದಾಪುರದ ಶ್ರೀರಾಜ್(31), ಪಡು ಮುಂಡುವಿನ ಕಿರಣ್(30), ಗಣೇಶ್(30), ಬ್ರಹ್ಮಾವರದ ಸುಧಾಕರ(42), ಸತೀಶ್(45), ರಾಜೇಶ್ (40), ಕಾರ್ತಿಕ್(31), ಸಾಸ್ತಾನದ ಗಣೇಶ್(40), ಕಕ್ಕುಂಜೆಯ ಗಣೇಶ್ (39), ಹಾವಂಜೆಯ ಮಹೇಶ್(50) ಎಂಬವರನ್ನು ಪೊಲೀಸರು ಬಂಧಿಸಿ, 78,520ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಆಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಂದೂರು: ಶಿರೂರು ಗ್ರಾಮದ ಜೋಗೂರು ಕ್ರಾಸ್ ಎಂಬಲ್ಲಿನ ಸರಕಾರಿ ಹಾಡಿಯಲ್ಲಿ ಡಿ.12ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಕೇಶವ, ಆದರ್ಶ, ಶ್ರೀಧರ ಜಟ್ಟಪ್ಪ, ಲೊಕೇಶ ಮತ್ತು ರಾಜೇಶ ಎಂಬವರನ್ನು ಪೊಲೀಸರು ಬಂಧಿಸಿ, 4330ರೂ. ನಗದು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಬಸ್ರೂರು ಗ್ರಾಮದ ಹಟ್ಟಿಕುದ್ರು ಮುಡುಕಿನ ಹಾರ ಎಂಬಲ್ಲಿರುವ ಸರ್ಕಾರಿ ಹಾಡಿಯಲ್ಲಿ ಡಿ.11ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಆಡುತ್ತಿದ್ದ ಅಣ್ಣಪ್ಪ, ನಟೇಶ, ನಟೇಶ ಪೂಜಾರಿ, ಮೋಹನ ಮತ್ತು ಪ್ರಸನ್ನ ಎಂಬವರನ್ನು ಬಂಧಿಸಿ, 2,300ರೂ. ನಗದು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News