ಗಾಂಜಾ ಸೇವನೆ ಆರೋಪ : ಒಂಭತ್ತು ಮಂದಿ ವಶಕ್ಕೆ

Update: 2023-07-22 15:22 GMT

ಮಣಿಪಾಲ, ಜು.22: ಹೆರ್ಗಾ ಗ್ರಾಮದ ಈಶ್ವರ ನಗರದ ಬಳಿ ಜು.19ರಂದು ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಣವ್ ಪ್ರಕಾಶ್, ಸ್ನೇಹ ಕುಲೈ, ಸೂರ್ಯ ಆರ್., ರೋಹಿತ್ ರಾಜೇಶ್, ಅಕ್ಷಾ, ಜಾರ್ಜ್, ಅಶಿನ್, ರೊಬಿನ್, ಸವೋನಾ ಎಂ.ಎಸ್. ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ಜು.21ರಂದು ನೀಡಿದ ವರದಿಯಂತೆ ಇವರೆಲ್ಲರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News