ಇಸ್ಪೀಟು ಜುಗಾರಿ: 12 ಮಂದಿ ಬಂಧನ

Update: 2023-09-19 13:39 GMT

ಕಾರ್ಕಳ, ಸೆ.19: ಕಲ್ಯಾ ಗ್ರಾಮದ ಪಡ್ಯಾ ಎಂಬಲ್ಲಿರುವ ಹಾಡಿಯಲ್ಲಿ ಸೆ.18ರಂದು ಮಧ್ಯಾಹ್ನ ಇಸ್ಪೀಟು ಜುಗಾರಿ ಆಡುತ್ತಿದ್ದ ರತ್ನಾಕರ(37), ಸುದೀಪ್(24), ಸಂದೀಪ(28), ಸಂತೋಷ್(35), ದಾಮೋದರ ಆಚಾರ್ಯ(38) ಎಂಬವರನ್ನು ಬಂಧಿಸಿ 4690ರೂ. ನಗದು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಟ: ಗುಂಡ್ಮಿ ಗ್ರಾಮದ ಸಾಸ್ತಾನ ಸಮೀಪದ ಹಾಡಿಯಲ್ಲಿ ಸೆ.18ರಂದು ಸಂಜೆ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ರಾಜೇಶ ಪೂಜಾರಿ(36), ರಾಘವೇಂದ್ರ ಮರಕಾಲ(41), ಭಾಸ್ಕರ ಮರಕಾಲ(38), ದೇವ(42), ವಿಘ್ನೇಶ ಪೂಜಾರಿ (28), ಉಮೇಶ ಪೂಜಾರಿ(50), ಶೇಖರ ಖಾರ್ವಿ(38) ಎಂಬವರನ್ನು ಬಂಧಿಸಿ, 15850ರೂ. ಹಾಗೂ 7 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News