ಮಣಿಪಾಲ: ನಗರಸಭೆಯ ಪಂಪ್ ಹೌಸ್ ಗೆ ಕಾರು ಢಿಕ್ಕಿ: ಸಿಬ್ಬಂದಿ ಅಪಾಯದಿಂದ ಪಾರು

Update: 2024-09-23 05:33 GMT

ಮಣಿಪಾಲ, ಸೆ.23: ಪರ್ಕಳ ಈಶ್ವರ ನಗರದ ರಸ್ತೆ ಬದಿಯಲ್ಲಿರುವ ಉಡುಪಿ ನಗರಸಭೆಗೆ ಸಂಬಂಧಪಟ್ಟ ಪಂಪ್ ಹೌಸ್ ಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಇಂದು ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ನಡೆದಿದೆ.

ಈ ವೇಳೆ ಪಂಪ್ ಹೌಸ್ ನಲ್ಲಿ ರಾತ್ರಿ ಮಲಗಿದ್ದ ಸಿಬ್ಬಂದಿಯೊಬ್ಬರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಮಣಿಪಾಲ ಕಡೆಯಿಂದ ಪರ್ಕಳ ಕಡೆ ಹೋಗುತ್ತಿದ್ದ ಕಾರು, ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಂಪ್ ಹೌಸ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಪಂಪ್ ಹೌಸ್ ಕಟ್ಟಡಕ್ಕೂ ಹಾನಿಯಾಗಿದೆ.

ಇಲ್ಲಿ ಯಾವುದೇ ಸುರಕ್ಷತಾ ಬೇಲಿ ಇಲ್ಲ. ಮುಂದೆ ಹಳೆ ರಸ್ತೆ ಇದೆ ಎಂಬುದಾಗಿ ಸೂಚನಾ ಫಲಕ ಕೂಡ ಅಳವಡಿಸಿಲ್ಲ. ಇತ್ತೀಚೆಗೆ ಈ ರಸ್ತೆಯ ಗುಂಡಿ ಮುಚ್ಚಿದ್ದರೂ ಮತ್ತೆ ಗುಂಡಿ ತೆರೆದಿದೆ. ಇದೇ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಎರಡು ಕಾರು ಅಪಘಾತಗಳು ಸಂಭವಿಸಿದ್ದವು. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News