ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ 15 ಮಂದಿ ಶಿಕ್ಷಕರ ಆಯ್ಕೆ

Update: 2024-09-04 14:04 GMT

ಉಡುಪಿ, ಸೆ.4: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲೆಯಲ್ಲಿ ಕಿರಿಯ ಮತ್ತು ಹಿರಿಯ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಾಗಿ ಒಟ್ಟು 15 ಮಂದಿ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರ ಹೀಗಿದೆ.

ಪ್ರೌಢಶಾಲಾ ವಿಭಾಗ: ಕಮಲ್ ಅಹ್ಮದ್, ಶಿವಪುರ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ (ಕಾರ್ಕಳ ವಲಯ), ಮಂಜುನಾಥ ಶೆಟ್ಟಿ, ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ (ಬೈಂದೂರು ವಲಯ), ಜ್ಯೋತಿ ಕೃಷ್ಣ ಪೂಜಾರಿ, ಕೋಡಿಕನ್ಯಾನ ಸೋಮಬಂಗೇರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿ (ಬ್ರಹ್ಮಾವರ ವಲಯ), ಮಾಲತಿ ವಕ್ವಾಡಿ, ಮಲ್ಪೆ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕಿ (ಉಡುಪಿ ವಲಯ) ಹಾಗೂ ಕರುಣಾಕರ ಶೆಟ್ಟಿ, ಬಿದ್ಕಲ್‌ಕಟ್ಟೆ ಕೆ.ಪಿ.ಎಸ್‌ನ ಮುಖ್ಯ ಶಿಕ್ಷಕ (ಕುಂದಾಪುರ ವಲಯ).

ಹಿರಿಯ ಪ್ರಾಥಮಿಕ ವಿಭಾಗ: ಭಾಸ್ಕರ ಪೂಜಾರಿ, ಕೊಕ್ಕರ್ಣೆ ಕೆ.ಪಿ.ಎಸ್ ನ ಸಹ ಶಿಕ್ಷಕ (ಬ್ರಹ್ಮಾವರ ವಲಯ), ರಾಮಕೃಷ್ಣ ಭಟ್, ಸಾಂತೂರುಕೊಪ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ (ಉಡುಪಿ ವಲಯ), ಶಶಿಕಲಾ ನಾರಾಯಣ ಶೆಟ್ಟಿ, ಕೈರಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ (ಕಾರ್ಕಳ ವಲಯ), ಜಯಾನಂದ ಪಟಗಾರ, ಹೆರಂಜಾಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ (ಬೈಂದೂರು ವಲಯ) ಹಾಗೂ ಸೀತಾರಾಮ ಶೆಟ್ಟಿ, ಹಂಗಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ (ಕುಂದಾಪುರ ವಲಯ).

ಕಿರಿಯ ಪ್ರಾಥಮಿಕ ವಿಭಾಗ: ಮಾಲಿನಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಚ್ಚೂರು-2 ಮುಖ್ಯ ಶಿಕ್ಷಕಿ (ಕಾರ್ಕಳ ವಲಯ), ಖಾತುನ್ ಬಿ, ಮಲ್ಲಾರು ಉರ್ದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ (ಉಡುಪಿ ವಲಯ), ರವಿರಾಜ ಶೆಟ್ಟಿ, ಹೈಕಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಣ ಶಿಕ್ಷಕ (ಬ್ರಹ್ಮಾವರ ವಲಯ), ಶ್ರೀನಿವಾಸ ಶೆಟ್ಟಿ, ಗೋಪಾಡಿ ಪಡು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ (ಕುಂದಾಪುರ ವಲಯ) ಹಾಗೂ ಅಮಿತಾ ಬಿ, ಬಾರಂದಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ (ಬೈಂದೂರು ವಲಯ).

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News