ಶಿರ್ವ: ಮನೆಗೆ ನುಗ್ಗಿ ನಗದು ಕಳವು

Update: 2023-08-06 16:03 GMT

ಶಿರ್ವ: ಬೆಳಪು ಗ್ರಾಮದ ಗಾಂಧಿಕಟ್ಟೆ ಅಂಬೇಡ್ಕರ್ ರಸ್ತೆ ಪಣಿಯೂರಲ್ಲಿರುವ ಮನೆಗೆ ಜು.31ರಿಂದ ಆ.6ರ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ಗಾಂಧಿಕಟ್ಟೆಯ ಲೀಲಾ ಎಂಬವರ ಮನೆಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಕಪಾಟಿನಲ್ಲಿದ್ದ 23000ರೂ. ನಗದನ್ನು ಕಳವು ಮಾಡಿ ಕೊಂಡು ಹೋಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News