ಉಡುಪಿ: ‘ಬಾಳ ಮುಸ್ಸಂಜೆಯಲ್ಲಿ’ ಕೃತಿ ಬಿಡುಗಡೆ

Update: 2024-09-03 15:41 GMT

ಉಡುಪಿ, ಸೆ.3: ನಿವೃತ್ತ ಬ್ಯಾಂಕ್ ಅಧಿಕಾರಿ ಶ್ರೀಧರ ಉದ್ಯಾವರ ಅವರ ಆತ್ಮ ಕಥನ ‘ಬಾಳ ಮುಸ್ಸಂಜೆ’ ಇತ್ತೀಚೆಗೆ ನರಸಿಂಗೆ ದೇವಳದ ಸಭಾಭವನ ದಲ್ಲಿ ಬಿಡುಗಡೆಗೊಂಡಿತು.

ಪುಸ್ತಕ ಅನಾವರಣಗೊಳಿಸಿ ಮಾತನಾಡಿದ ಮುರಲಿ ಕಡೆಕಾರ್, ಯು. ಶ್ರೀಧರರು ಅಪಾರ ಸಾಮಾಜಿಕ ಕಳಕಳಿ ಹೊಂದಿದ ಕುಟುಂಬ ಪ್ರೇಮಿ. ಶ್ರೀನಾರಾಯಣ ಗುರುಗಳ ಸಂದೇಶವನ್ನು ಬದುಕಿನಲ್ಲಿ ಆಚರಿಸಿ ತೋರಿದ ಮಾನವತಾವಾದಿ ಎಂದರು.

ಮನೋರೋಗ ತಜ್ಞ ಡಾ.ವಿರೂಪಾಕ್ಷ ದೇವರುಮನೆ ಮಾತನಾಡಿ, ಇಳಿ ವಯಸ್ಸಿನಲ್ಲೂ ಯು.ಶ್ರೀಧರರ ಜೀವನೋತ್ಸಾಹ ಕಿರಿಯರಿಗೆ ಮಾದರಿ ಹಾಗೂ ಸ್ಪೂರ್ತಿದಾಯಕ ಎಂದು ಅಭಿಪ್ರಾಯ ಪಟ್ಟರು.

ಯು.ಶ್ರೀಧರ ಅವರ ಹನ್ನೊಂದನೆಯ ಕೃತಿ ಇದಾಗಿದ್ದು, ಈ ಪುಸ್ತಕದ ಮಾರಾಟದಿಂದ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುವುದಾಗಿ ಶ್ರೀಧರರು ತಿಳಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬಿಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News