ಬೈಕ್ ನಲ್ಲಿ ಕಾರ್ಗಿಲ್ ಗೆ ಹೊರಟ ಬ್ಯಾರಿ ದಂಪತಿಗೆ ಭಟ್ಕಳದಲ್ಲಿ ಸ್ವಾಗತ

Update: 2023-07-29 17:20 GMT

ಭಟ್ಕಳ: ಕಾರ್ಗಿಲ್‌ನಲ್ಲಿ ಭಾರತೀಯ ಸೈನಿಕರೊಂದಿಗೆ ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಲು ಮಂಗಳೂರಿ ನಿಂದ ಬೈಕ್ ಮೂಲಕ ಕಾರ್ಗಿಲ್ ಗೆ ಪ್ರಯಾಣಿಸಿದ ಸೈಫ್ ಸುಲ್ತಾನ್ ಮತ್ತು ಆದಿಲಾ ಫರ್ಹೀನ್ ದಂಪತಿ ಶುಕ್ರವಾರ ರಾತ್ರಿ ಭಟ್ಕಳ ತಲುಪಿದರು.

ಭಟ್ಕಳದಲ್ಲಿ ಅವರನ್ನು ಬರಮಾಡಿಕೊಂಡ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ದಂಪತಿಯನ್ನು ಸನ್ಮಾನಿಸಿ ಸುಖಕರ ಪ್ರಯಾಣಕ್ಕಾಗಿ ಶುಭ ಕೋರಿದರು.

ಈ ಸಂದರ್ಭ ಮಾತನಾಡಿದ ಸೈಫ್ ಸುಲ್ತಾನ್ ಭಟ್ಕಳದ ಪರಿಸರ, ಇಲ್ಲಿನ ವಾತಾವರಣ, ಜನರು ನೀಡಿದ ಪ್ರೀತಿ, ಗೌರವ ಕುರಿತು ಪ್ರಶಂಸನೀಯ ಮಾತುಗಳನ್ನಾಡಿ, ರಕ್ತದಾನವು ಬಹಳ ಮಹತ್ತರ ಕಾರ್ಯವಾಗಿದ್ದು ತಮ್ಮ ಪ್ರಯಾಣದಲ್ಲಿ ರಕ್ತದಾನದ ಕುರಿತು ಜಾಗೃತಿಯನ್ನು ಮೂಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಅಂಜುಮನ್ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಮುಬಶ್ಶಿರ್ ಹಲ್ಲಾರೆ ಸೈಫ್ ಸುಲ್ತಾನ್ ರ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು ಕಾರ್ಗಿಲ್ ನಲ್ಲಿ ನಡೆಯುತ್ತಿರುವ ರಕ್ತದಾನ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಇದು ಕರಾವಳಿಗಷ್ಟೆ ಅಲ್ಲ ಇಡೀ ಕರ್ನಾಟಕಕ್ಕೆ ಹೆಮ್ಮೆ ತರುವಂತದ್ದು, ಇವರ ಮಾನವೀಯ ಕಳಕಳಿ, ಬಡವರ ಮತ್ತು ಮರ್ದಿತರ ಕುರಿತ ಕಾಳಜಿ ಇವರನ್ನು ಈ ಹಂತಕ್ಕೆ ತಲುಪಿಸಿದೆ ಇವರ ಪ್ರಯಾಣ ಸುಖಕರವಾಗಲಿ ಎಂದು ಹಾರೈಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News