ಹೊನ್ನಾವರ : ಅಳಿವೆಬಾಗಿಲಿನಲ್ಲಿ ಸಿಲುಕಿದ ಮೀನುಗಾರಿಕಾ ಬೋಟು

Update: 2024-08-30 07:16 GMT

ಹೊನ್ನಾವರ : ತಾಲೂಕಿನ ಕಾಸರಕೋಡು ಸಮೀಪ ಮೀನುಗಾರಿಕಾ ಬೋಟು ಅಳಿವೆಗೆ ಸಿಲುಕಿ ತೊಂದರೆಗೊಳಗಾದ ಘಟನೆ ರಾತ್ರಿ ಬಂದರು ಸಮೀಪ ಗುರುವಾರ ನಡೆದಿದೆ.

ಅನ್ಸಾರ್ ಸಾಬ್ ಎಂಬವರಿಗೆ ಸೇರಿದ ಎಂಎಂಎಫ್ ‌ಬೋಟಿನಲ್ಲಿ ಒಟ್ಟು 30 ಮೀನುಗಾರರಿದ್ದರು. ಬೋಟು ಅಳಿವೆಯಲ್ಲಿ ಸಿಲುಕಿದಾಗ ಮೀನುಗಾರರು ರಕ್ಷಣೆಗಾಗಿ ಕೂಗಿಕೊಂಡಾಗ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದರು.

ಅಲೆಗಳ ಹೆಚ್ಚಳದಿಂದ  ಸ್ಥಳಕ್ಕೆ ಹೋಗಲು ಸಾಧ್ಯವಾಗಿಲ್ಲ. ಇಂದು ಬೆಳಿಗ್ಗೆ ತೀರದ ಸಮೀಪ ಬೋಟು ಬಂದಿದ್ದು ಮಗುಚಿ ಬೀಳುವ ಆತಂಕವಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News