ಕಾರವಾರ | ಮನೆಗೆ ನುಗ್ಗಿ ಉದ್ಯಮಿಯ ಬರ್ಬರ ಹತ್ಯೆ: ಪತ್ನಿಗೆ ಗಂಭೀರ ಹಲ್ಲೆ

Update: 2024-09-22 06:22 GMT

ವಿನಾಯಕ ನಾಯ್ಕ

ಕಾರವಾರ: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಉದ್ಯಮಿಯೊಬ್ಬರನ್ನು ಹತ್ಯೆಗೈದು, ಅವರ ಪತ್ನಿಯನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಇಂದು ಮುಂಜಾನೆ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿ ನಡೆದಿದೆ.

ಉದ್ಯಮಿ ವಿನಾಯಕ ನಾಯ್ಕ (54) ಹತ್ಯೆಯಾದವರು. ದುಷ್ಕರ್ಮಿಗಳ ದಾಳಿಯಿಂದ ಅವರ ಪತ್ನಿ ವೈಶಾಲಿಯ ತಲೆಗೆ ತೀವ್ರತರದ ಗಾಯಗಳಾಗಿದ್ದು, ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿನಾಯಕ ನಾಯ್ಕ ಹಾಗೂ ವೈಶಾಲಿ ದಂಪತಿ ಹಣಕೋಣ ಮೂಲದವರಾಗಿದ್ದು, ಪುಣೆ ನಗರದಲ್ಲಿ ವಾಸವಿದ್ದು, ಕೈಗಾರಿಕೋದ್ಯಮ ನಡೆಸುತ್ತಿದ್ದರು. ಹಣಕೋಣದ ಸಾತೇರಿ ದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಪುಣೆಯಿಂದ ಬಂದಿದ್ದ ದಂಪತಿ ಹಣಕೋಣದಲ್ಲಿನ ಮನೆಯಲ್ಲಿ ವಾಸವಿದ್ದರು. ಇಂದು ಬೆಳಗ್ಗಿನ ಜಾವ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು ವಿನಾಯಕ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ವಿನಾಯಕ ಅವರ ಮೃತದೇಹ ಮನೆಯ ಕೋಣೆಯೊಂದರಲ್ಲಿ ಪತ್ತೆಯಾಗಿದೆ.

ಹಳೇ ವೈಷಮ್ಯ ಅಥವಾ ದರೋಡೆಯ ಉದ್ದೇಶದಿಂದ ನಡೆದಿರುವ ಕೊಲೆಯೇ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ

ಚಿತ್ತಾಕುಲಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಪ್ರಾರಂಭಿಸಿದ್ದಾರೆ.

ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News