ಕಾರವಾರ ಟನಲ್ ವಾಹನ ಸಂಚಾರಕ್ಕೆ ಅನುವು

Update: 2023-10-02 17:14 GMT

ಕಾರವಾರ : ನಗರಕ್ಕೆ ಹೊಂದಿಕೊಂಡಿರುವ ಪ್ಲೈಓವರ್ ಸನಿಹದ ಟನಲ್ ಗಳನ್ನು ವಾಹನ ಸಂಚಾರಕ್ಕೆ ಸೋಮವಾರ ಅನುವು ಮಾಡಿಕೊಡಲಾಯಿತು.

ಸೋಮವಾರ ಮಧ್ಯಾಹ್ನ ಶಾಸಕ ಸತೀಶ್ ಸೈಲ್, ಎಂಎಲ್ ಸಿ ಗಣಪತಿ ಉಳ್ವೇಕರ್,‌ ನಗರಸಭೆಯ ಮಾಜಿ ಅಧ್ಯಕ್ಷ ನಿತಿನ್ ಪಿಕಳೆ, ಮಾಜಿ ಉಪಾಧ್ಯಕ್ಷ ಪಿ.ಪಿ.ನಾಯ್ಕ ಮಾತುಕತೆ ನಡೆಸಿದರು. ಜಿಲ್ಲಾಧಿಕಾರಿಗೆ ಕರೆ ಮಾಡಿದ ಶಾಸಕರು , ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಟನಲ್ ಸಂಚಾರ ಮುಕ್ತ ಮಾಡಲು ಸೂಚಿಸಿದರು.

ಕಾರವಾರ ಬಳಿಯ ಟನಲ್ ಸೋಮವಾರ ಓಪನ್ ಆಗಿದ್ದಕ್ಕೆ ಸಾರ್ವಜನಿಕ ವಲಯ ಹಾಗೂ ವಾಹನ ಸವಾರರು ಸಂತಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News