ಪರಿಸರ ಸ್ವಚ್ಚತೆ ಕಾಪಾಡುವ ಪೌರಕಾರ್ಮಿಕರು ದೇಶ ರಕ್ಷಿಸುವ ಯೋಧರಿದ್ದಂತೆ: ಸಚಿವ ಮಂಕಾಳ್ ವೈದ್ಯ

Update: 2024-09-24 15:22 GMT

ಭಟ್ಕಳ: ಪರಿಸರದ ಸ್ವಚ್ಛತೆ ಕಾರ್ಯವನ್ನು ದೇವರ ಸೇವೆ ಎಂದು ಭಾವಿಸಿ ಜನರ ಆರೋಗ್ಯವನ್ನು ಕಾಪಾಡುತ್ತಿರುವ ಪುರಸಭೆಯ ಸ್ವಚ್ಛತಾ ಕಾರ್ಮಿಕರು ನಮ್ಮ ದೇಶದ ಯೋಧರು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಖಾತೆ ಸಚಿವ ಮಂಕಾಳ ವೈದ್ಯ ಹೇಳಿದರು.

ಅವರು ಭಟ್ಕಳದಲ್ಲಿ ಆಯೋಜಿಸಲಾದ ಸ್ವಚ್ಛತಾ ಕಾರ್ಮಿಕ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್‌ ನೇತೃತ್ವದಲ್ಲಿ ನಗರದ ಬಿಲಾಲ್ ಮದುವೆ ಹಾಲ್‌ನಲ್ಲಿ ಆಯೋಜಿಸ ಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛತಾ ಕಾರ್ಮಿಕರನ್ನು ಉತ್ತೇಜಿಸಲು ಸರ್ಕಾರವು ಈ ಕಾರ್ಮಿಕರು ಮತ್ತು ಅವರ ಮಕ್ಕಳಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ರಾಜ್ಯ ಸರ್ಕಾರವು ಸದಾ ಸ್ವಚ್ಛತಾ ಕಾರ್ಮಿಕರೊಂದಿಗೆ ನಿಂತಿದೆ. ಸ್ವಚ್ಛತಾ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದಕ್ಕೆ ನಾನೇ ಕೂಡ ಯಾವಾ ಗಲೂ ಸಿದ್ಧನಿದ್ದೇನೆ. ಅಲ್ಲದೆ, ಆ ಮಕ್ಕಳ ಯಾವುದೇ ಉನ್ನತ ಶಿಕ್ಷಣದ ಅಗತ್ಯಗಳಿಗೆ ನನ್ನಿಂದ ಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭ ಭಟ್ಕಳ ಪುರಸಭೆ ಮತ್ತು ಜಾಲಿ ಪಟ್ಟಣ ಪಂಚಾಯತ್‌ ವತಿಯಿಂದ ಸಚಿವ ವೈದ್ಯ ರಿಗೆ ಸನ್ಮಾನಿಸಲಾಯಿತು. ಸಚಿವರು ಟಿಎಂಸಿ ಮತ್ತು ಜಾಲಿ ಪಟ್ಟಣ ಪಂಚಾಯತ್‌ನ 70 ಉದ್ಯೋಗಿಗಳಿಗೆ ಸರ್ಕಾರದ ವಿಶೇಷ ಭತ್ಯೆಯ ಚೆಕ್‌ಗಳನ್ನು ವಿತರಿಸಿದರು.

ಸ್ವಚ್ಛತಾ ಕಾರ್ಮಿಕ ದಿನದ ಅಂಗವಾಗಿ ಪುರಸಭಾ ಉದ್ಯೋಗಿಗಳ ನಡುವೆ ಮನರಂಜನಾ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಆಯೋಜಿಸಲಾದವು.

ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಕಾಜಿಯಾ ಅಫ್ಶಾ, ಉಪಾಧ್ಯಕ್ಷ ಸೈಯದ್ ಇಮ್ರಾನ್ ಲಂಕಾ, ಭಟ್ಕಳ ಪುರಸಭೆ ಉಪಾಧ್ಯಕ್ಷ ಅಲ್ತಾಫ್ ಮುಹಿದ್ದೀನ್ ಖರೂರಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಟಿಎಂಸಿ ಮುಖ್ಯ ಅಧಿಕಾರಿ ನೀಲಕಂಠ ಮೆಸ್ತಾ ಸ್ವಾಗತಿಸಿದರು. ಇಂಜಿನಿಯರ್ ವೆಂಕಟೇಶ್ ನಾವೋಡ ಪ್ರಸ್ತಾವಿಕವಾಗಿ ಮಾತನಾಡಿದರು. ಜಾಲಿ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಮಂಜಪ್ಪ ಎನ್. ಅವರು ಧನ್ಯವಾದ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News