ಮಹಿಳೆ ಆತ್ಮಹತ್ಯೆ

Update: 2023-10-21 17:57 GMT

ಭಟ್ಕಳ: ಏಳು ತಿಂಗಳ ಮಗುವಿನ ತಾಯಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಶನಿವಾರ ನಡೆದಿದೆ.

ಶೀಲಾ ನಾಗೇಶ್ ದೇವಾಡಿಗ (29) ಮೃತರು ಎಂದು ಗುರುತಿಸಲಾಗಿದೆ. ಆಕೆಯ ಅತ್ತೆ ಹೂವು ಮಾರಲು ಮಾರುಕಟ್ಟೆಗೆ ತೆರಳಿದ್ದು, ಆಕೆಯ ಪತಿ ಕೂಡ ಕೆಲಸಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಬೆಂಗ್ರೆ ಮಾವಿನಕಟ್ಟೆಯ ನಾಗೇಶ್ ದೇವಾಡಿಗ ಎಂಬುವವರೊಂದಿಗೆ ಶೀಲಾ ಮದುವೆಯಾಗಿ ಕೇವಲ ಒಂದೂವರೆ ವರ್ಷವಾಗಿತ್ತು. ಆಕೆಯ ಆತ್ಮಹತ್ಯೆಯ ಕಾರಣ ಇನ್ನೂ ತಿಳಿದುಬಂದಿಲ್ಲ. 

ಘಟನೆ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News