ಸೆ.20: ಯುನಿವೆಫ್ ಕರ್ನಾಟಕದಿಂದ ಅಭಿಯಾನ ಆರಂಭ

Update: 2024-09-19 13:34 GMT

ಮಂಗಳೂರು, ಸೆ.19: ಯುನಿವೆಫ್ ಕರ್ನಾಟಕದ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರ ಬಗ್ಗೆ ಸ್ಪಷ್ಟ ತಿಳುವಳಿಕೆ ನೀಡುವ ಸಲುವಾಗಿ ಱಮಾನವ ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಸೆ.20ರಿಂದ ಡಿ. 20 ರವರೆಗೆ ಱಅರಿಯಿರಿ ಮನುಕುಲದ ಪ್ರವಾದಿಯನ್ನು ಅಭಿಯಾನ ನಡೆಯಲಿದೆ.

ಈ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಸೆ.20ರಂದು ಸಂಜೆ 6:45ಕ್ಕೆ ನಗರದ ಕಂಕನಾಡಿಯ ಜಮೀಯ್ಯತುಲ್ ಫಲಾಹ್ ಹಾಲ್‌ನಲ್ಲಿ ನಡೆಯಲಿದೆ. ಮಂಗಳೂರಿನ ಶಾ ಅಮೀರ್ ಮಸೀದಿಯ ಖತೀಬ್ ಮೌಲಾನಾ ಮುಫ್ತಿ ರಿಯಾಝುಲ್ ಹಖ್ ರಶಾದಿ ಉದ್ಘಾಟಿಸಲಿದ್ದು, ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮುಖ್ಯ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದ ಪ್ರಚಾರಾರ್ಥ ಸೆ.20ರ ಸಂಜೆ 5ಕ್ಕೆ ನಗರದ ಫಳ್ನೀರ್‌ನಲ್ಲಿರುವ ಇಂದಿರಾ ಆಸ್ಪತ್ರೆ ಬಳಿಯ ಲುಲು ಸೆಂಟರ್‌ ನಿಂದ ಕಂಕನಾಡಿ ಜಮೀಅತುಲ್ ಫಲಾಹ್ ಹಾಲ್‌ವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ ಎಂದು ಅಭಿಯಾನ ಸಂಚಾಲಕ ವಕಾಝ್ ಅರ್ಸಲನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News