ಉತ್ತಮ ಶಿಕ್ಷಕ ಪ್ರಶಸ್ತಿ: ದ.ಕ. ಜಿಲ್ಲೆಯ 21 ಮಂದಿ ಆಯ್ಕೆ

Update: 2023-09-03 10:01 GMT

ಮಂಗಳೂರು, ಸೆ. 3: ದ.ಕ. ಜಿಲ್ಲಾ ಮಟ್ಟದಲ್ಲಿ 2023-24ನೆ ಸಾಲಿನ ಕಿರಿಯ, ಹಿರಿಯ, ಪ್ರೌಢಶಾಲಾ ವಿಭಾಗಗಳಿಂದ ತಾಲೂಕಿಗೆ ಮೂರು ಶಿಕ್ಷಕರಂತೆ 7 ತಾಲೂಕಿನ ಒಟ್ಟು 21 ಶಿಕ್ಷಕರನ್ನು ಉತ್ತಮ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ದ.ಕ. ಜಿಲ್ಲಾ ಮಟ್ಟದ ಹಾಗೂ ಸುಳ್ಯ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸೆ. 5ರಂದು ಬೆಳಗ್ಗೆ 10 ಗಂಟೆಗೆ ಸುಳ್ಯದ ಪರಿವಾರ ಕಾನ ಅಮರಜ್ಯೋತಿ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನದಲ್ಲಿ ನಡೆಯಲಿದ್ದು, ಈಸಂದರ್ಭ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ (ಆಡಳಿತ) ದಯಾನಂದ ರಾಮಚಂದ್ರ ನಾಯ್ಕಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

2023-24ನೆ ಸಾಲಿನ ದ.ಕ. ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ಶಿಕ್ಷಕರು

*ಗೋಪಾಲಕೃಷ್ಣ, ನೇರಳಕಟ್ಟೆ ಸಹ ಶಿಕ್ಷಕರು, ಸ.ಪ್ರೌ. ಶಾಲೆ. ನಾರ್ಶ ಮೈದಾನ, ಬಂಟ್ವಾಳ.

*ರಾಮಕೃಷ್ಣ ಭಟ್, ಮುಖ್ಯ ಶಿಕ್ಷಕರು, ಎಸ್ಡಿಎಂ ಪ್ರೌಢಶಾಲೆ, ಬೆಳಾಲು, ಬೆಳ್ತಂಗಡಿ.

*ಆಲ್ವಿನ್ ಅರುಣ್ ನೊರೋನ್ಹ, ಸಹ ಶಿಕ್ಷಕರು, ಸೈಂಟ್ ಜೋಸೆಫ್ ಪಿಯು ಕಾಲೇಜು (ಪ್ರೌ. ಶಾಲಾ ವಿಭಾಗ), ಬಜ್ಪೆ, ಮಂಗಳೂರು ಉತ್ತರ.

*ಕೃಷ್ಣ ಎನ್., ಸಹ ಶಿಕ್ಷಕರು, ಕಿಟ್ಟೆಲ್ ಮೆಮೋರಿಯಲ್ ಪ್ರೌ.ಶಾಲೆ, ಗೋರಿಗುಡ್ಡ, ಮಂಗಳೂರು.

*ಡಾ. ಪ್ರತಿಮಾ ಎಚ್.ಪಿ., ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ನೀರ್ಕೆರೆ, ಮೂಡಬಿದ್ರೆ.

*ಹರಿಶ್ಚಂದ್ರ ಕೆ., ಮುಖ್ಯಶಿಕ್ಷಕರು, ಸಂತ ಜಾರ್ಜ್ ಅನುದಾನಿತ ಪ್ರೌಢಶಾಲೆ, ಕುಂತೂರುಪದವು, ಪುತ್ತೂರು.

*ಉದಯ ಪ್ರಕಾಶ್ ರೈ, ಸಹ ಶಿಕ್ಷಕರು, ವಿದ್ಯಾಬೋಧಿನಿ ಪ್ರೌ. ಶಾಲೆ, ಬಾಳಿಲ, ಸುಳ್ಯ

*ಶಕುಂತಳಾ ಎಸ್. ಉಳ್ಳಾಲ, ಮುಖ್ಯ ಶಿಕ್ಷಕರು, ದ.ಕ.ಜಿ.ಪಂ. ಹಿ.ಪ್ರಾ. ಶಾಲೆ, ಪುದು, ತುಂಬೆ, ಬಂಟ್ವಾಳ.

*ಪ್ರಶಾಂತ ಸುವರ್ಣ, ದೈಹಿಕ ಶಿಕ್ಷಣ ಶಿಕ್ಷಕರು, ದ.ಕ.ಜಿ.ಪಂ.. ಹಿ.ಪ್ರಾ.ಶಾಲೆ ಬಂದಾರು, ಬೆಳ್ತಂಗಡಿ.

*ಗಣೇಶ್ ಕುಮಾರ್, ಮುಖ್ಯ ಶಿಕ್ಷಕರು, ದ.ಕ.ಜಿ.ಪಂ. ಹಿ.ಪ್ರಾ ಶಾಲೆ, ಮಣ್ಣಗುಡ್ಡೆ, ಮಂಗಳೂರು ಉತ್ತರ.

*ದಾಕ್ಷಾಯಿಣಮ್ಮ, ಸಹ ಶಿಕ್ಷಕರು, ದ.ಕ.ಜಿ.ಪಂ. ಮಾ. ಹಿ.ಪ್ರಾಥಮಿಕ ಶಾಲೆ, ಶಕ್ತಿನಗರ, ಮಂಗಳೂರು ದಕ್ಷಿಣ.

*ಸುಜಾತಾ ಕುಮಾರಿ, ಸಹಶಿಕ್ಷಕರು, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಣಪಿಲ, ಮೂಡಬಿದ್ರೆ.

*ಶುಭಲತಾ, ಮುಖ್ಯಶಿಕ್ಷಕರು, ದ.ಕ.ಜಿ.ಪಂ. ಹಿ.ಪ್ರಾ.ಶಾಲೆ, ಆನಡ್ಕ, ಪುತ್ತೂರು.

*ಹನುಮಂತಪ್ಪ ಜಿ. ಸಹಶಿಕ್ಷಕರು, ಶ್ರೀ ಶಾರದಾ ಅನುದಾನಿತ ಹಿ.ಪ್ರಾ. ಶಾಲೆ, ಗೂನಡ್ಕ, ಸುಳ್ಯ.

*ವಿಜಯಶ್ರೀ, ಸಹಶಿಕ್ಷಕರು, ಸರಕಾರಿ ಮಾ.ಹಿ. ಪ್ರಾ. ಶಾಲೆ, ಚೆನ್ನೈತೋಡಿ, ಬಂಟ್ವಾಳ.

*ಕಲ್ಲೇಶಪ್ಪ ಬಿ., ಮುಖ್ಯ ಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ, ಮುಂಡೂರು, ಬೆಳ್ತಂಗಡಿ.

*ಜಯಂತಿ, ಸಹ ಶಿಕ್ಷಕರು, ದ.ಕ.ಜಿ.ಪಂ. ಹಿ.ಪ್ರಾ. ಶಾಲೆ ಬಡಗ ಎಕ್ಕಾರು, ಮಂಗಳೂರು ಉತ್ತರ.

*ಕಾರ್ಮಿನ್ ಡಿಸೋಜಾ, ಸಹಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ, ಆಚಾರಿ ಜೋರ ಕುಪ್ಪೆಪದವು, ಮಂಗಳೂರು ದಕ್ಷಿಣ.

*ವಾಣಿಶ್ರೀ, ಸಹ ಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ ಮಾಡಂಗಡಿ, ಮೂಡಬಿದ್ರೆ.

*ಆನಂದ ಮೂರ್ತಿ ಡಿ.ಎಸ್., ಸಹ ಶಿಕ್ಷಕರು, ಸರಕಾರಿ ಕಿ.ಪ್ರಾ. ಶಾಲೆ, ಮೂರಾಜೆಕೊಪ್ಪ, ಪುತ್ತೂರು.

*ರಾಧಮ್ಮ ಕೆ., ಸಹಶಿಕ್ಷಕಿ, ಸರಕಾರಿ ಕಿ.ಪ್ರಾ. ಶಾಲೆ, ಬೊಳುವೈಲು, ಸುಳ್ಯ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News