ಸ್ಕೂಟರ್‌ಗೆ ಬಸ್ ಢಿಕ್ಕಿ : ಯುವತಿಗೆ ಗಾಯ

Update: 2023-11-12 14:47 GMT

ಮಂಗಳೂರು, ನ.12: ಸ್ಕೂಟರ್‌ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ಯುವತಿ ಗಂಭೀರ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಪುನೀತ್ ರಾಜ್ ಎಂಬವರು ತನ್ನ ಸ್ಕೂಟರ್‌ನಲ್ಲಿ ವನಿತಾ ಅವರನ್ನು ಕುಳ್ಳಿರಿಸಿಕೊಂಡು ಹೋಗುತ್ತಿದ್ದಾಗ ನಗರದ ಕೊಡಿಯಾಲ್‌ ಗುತ್ತು ವೃತ್ತದ ಬಳಿ ಅತಿ ವೇಗವಾಗಿ ಚಲಿಸಿಕೊಂಡು ಬಂದ ಬಸ್ ಹಿಂದಿನಿಂದ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಇದರಿಂದ ಸವಾರ ಪುನೀತ್ ರಾಜ್ ಮತ್ತು ಹಿಂಬದಿ ಕುಳಿತಿದ್ದ ವನಿತಾ ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದರು. ಈ ಸಂದರ್ಭ ಬಸ್‌ನ ಎದುರಿನ ಚಕ್ರ ವನಿತಾಳ ಪಾದದ ಮೇಲೆ ಹರಿದ ಪರಿಣಾಮ ಗಂಭೀರ ಗಾಯವಾಗಿದೆ. ಪುನೀತ್ ರಾಜ್‌ಗೂ ಸಣ್ಣ ಪುಟ್ಟ ಗಾಯವಾಗಿದೆ. ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News