ಕೊಣಾಜೆ: ಹೇಮಾವತಿ ಅವರಿಗೆ ಪಿಎಚ್ ಡಿ ಪದವಿ
Update: 2025-03-21 14:58 IST

ಕೊಣಾಜೆ: ಹೇಮಾವತಿ ಅವರು ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾದ ಪ್ರೊ. ನಾಗಪ್ಪ ಗೌಡ ಆರ್. ಅವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ "ಪ್ರಭಾಕರ ನೀರ್ ಮಾರ್ಗ ಅವರ ಕಾದಂಬರಿಗಳಲ್ಲಿ ಪ್ರಾದೇಶಿಕ ಸಂಸ್ಕೃತಿಯ ಪ್ರತಿನಿಧೀಕರಣ" ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್. ಡಿ ಪದವಿಯನ್ನು ನೀಡಿದೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಗ್ರಾಮದ ದಿ. ಅಣ್ಣಪ್ಪ ಮೂಲ್ಯ ಮತ್ತು ಸೇಸಮ್ಮ ದಂಪತಿಯ ಪುತ್ರಿ.