ಮಜ್ಲಿಸು ಉಲಮಾಇಸ್ಸಅದೀಸ್ ಉಳ್ಳಾಲ ತಾಲೂಕು ಸಮಿತಿಯ ಮಹಾಸಭೆ

Update: 2023-12-21 10:37 GMT

ಉಸ್ಮಾನ್ ಸಅದಿ ಪಡಿಕ್ಕಲ್

ಉಳ್ಳಾಲ, ಡಿ.21: ಮಜ್ಲಿಸು ಉಲಮಾಇಸ್ಸಅದೀಸ್ ಉಳ್ಳಾಲ ತಾಲೂಕು ಸಮಿತಿಯ ಮಹಾಸಭೆಯು ತಿಬ್ಲೆಪದವು ರಹ್ಮಾನಿಯ ಮದ್ರಸದಲ್ಲಿ ಇತ್ತೀಚೆಗೆ ನಡೆಯಿತು.

ಸಅದೀಸ್ ಕೇಂದ್ರ ಸಮಿತಿಯ ಕೋಶಾಧಿಕಾರಿ ಇಸ್ಮಾಯೀಲ್ ಸಅದಿ ಉರುಮಣೆ ಸಭೆಯನ್ನು ಉದ್ಘಾಟಿಸಿದರು. ಉರುಮಣೆ ಇಸ್ಮಾಯೀಲ್ ಸಅದಿ ದುಆಗೈದರು. ಉಸ್ಮಾನ್ ಸಅದಿ ಪಡಿಕ್ಕಲ್ ಅಧ್ಯಕ್ಷತೆ ವಹಿಸಿದ್ದರು.

ಉಸ್ಮಾನ್ ಸಅದಿ ಪಟ್ಟೋರಿ, ಅಬ್ದುರ್ರಹ್ಮಾನ್ ಸಅದಿ ಕಂಕನಾಡಿ, ಹನೀಫ್ ಸಅದಿ ಬದ್ಯಾರ್ ಮಾತನಾಡಿದರು.

ಇದೇ ವೇಳೆ 2024-26ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಉಸ್ಮಾನ್ ಸಅದಿ ಪಡಿಕ್ಕಲ್, ಉಪಾಧ್ಯಕ್ಷರಾಗಿ ಉಮರ್ ಸಅದಿ ನಡುಪದವು, ಮುಹಮ್ಮದ್ ಶರೀಫ್ ಸಅದಿ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಫ ಸಅದಿ ಹರೇಕಳ, ಜೊತೆ ಕಾರ್ಯದರ್ಶಿಯಾಗಿ ಹಸನ್ ಸಅದಿ ಅಸೈ, ಫೈಝಲ್ ಸಅದಿ ಕೆ.ಸಿ.ರೋಡ್, ಕೋಶಾಧಿಕಾರಿಯಾಗಿ ಹನೀಫ್ ಸಅದಿ ಅಸೈ, ಸಾಂತ್ವನ ವಿಭಾಗದ ಅಧ್ಯಕ್ಷ ಉಮರ್ ಸಅದಿ ನಡುಪದವು, ಕಾರ್ಯದರ್ಶಿ ಫೈಝಲ್ ಸಅದಿ ಕೆ.ಸಿ.ರೋಡ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸ್ಮಾಯೀಲ್ ಸಅದಿ ಉರುಮಣೆ, ಹನೀಫ್ ಸಅದಿ ಬದ್ಯಾರ್, ಅಬ್ದುರ್ರಹ್ಮಾನ್ ಸಅದಿ ಕಂಕನಾಡಿ, ಅಬ್ದುಲ್ ಅಝೀಝ್ ಬೆಳ್ಮದೋಟ, ಅಶ್ರಫ್ ಸಅದಿ ಪಡಿಕ್ಕಲ್, ಅಬ್ದುರ್ರಝಾಕ್ ಸಅದಿ ಪರೇಕಳ, ಇಯಾಝ್ ಸಅದಿ ಉಳ್ಳಾಲ, ಅಬೂಬಕರ್ ಸಿದ್ದೀಕ್ ಸಅದಿ ಅಡ್ಕರೆಪಡ್ಪು, ಮಸೂದ್ ಸಅದಿ ಕಿನ್ಯ, ಅನ್ಸಾರ್ ಸಅದಿ ಉಚ್ಚಿಲ, ಉಮರ್ ಸಅದಿ ಬಾಳೆಪುಣಿ, ರಫೀಕ್ ಸಅದಿ ಸಜಿಪ, ಕಬೀರ್ ಸಅದಿ ಉಳ್ಳಾಲ, ನಿಸಾರ್ ಸಅದಿ ಬಾಳೆಪುಣಿ, ಮಸೂದ್ ಸಅದಿ ಉಳ್ಳಾಲ ಆಯ್ಕೆಯಾದರು.

ಎಂ.ಮುಸ್ತಫ ಸಅದಿ ಹರೇಕಳ ಸ್ವಾಗತಿಸಿದರು. ಫೈಝಲ್ ಸಅದಿ ಕೆ.ಸಿ.ರೋಡ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News