ಪರಾರಿ - ಉಳಾಯಿಬೆಟ್ಟು - ಮಲ್ಲೂರು ಘನ ವಾಹನಗಳ ಸಂಚಾರ ತಾತ್ಕಾಲಿಕ ನಿಷೇಧ

Update: 2024-08-14 14:40 GMT

ಸಾಂದರ್ಭಿಕ ಚಿತ್ರ

ಮಂಗಳೂರು,ಆ.14: ತಾಲೂಕಿನ ಪರಾರಿ-ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯ ರಸ್ತೆಯ 0.95 ಕಿ.ಮೀ. ಸೇತುವೆ ದುಸ್ಥಿತಿಯಲ್ಲಿದೆ. ವಾಹನ ಸಂಚಾರಕ್ಕೆ ಅಪಾಯಕಾರಿ ಆಗಿರುವುದರಿಂದ ಮುಂದಿನ ಸೂಚನೆಯವರೆಗೆ ಈ ಸೇತುವೆಯಲ್ಲಿ ಘನ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಸಂಚಾರ ಮಾರ್ಗ ಬದಲಾವಣೆಯನ್ನು ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.

ಪರಾರಿ-ಉಳಾಯಿಬೆಟ್ಟು ಸೇತುವೆಯ ಮೂಲಕ ಪರಾರಿ-ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯರಸ್ತೆಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಗಳನ್ನು ಬಳಸಿಕೊಂಡು ಸಂಚರಿಸಬಹುದಾಗಿದೆ.

ಮಲ್ಲೂರು ಕಡೆಯಿಂದ ವಾಮಂಜೂರು (ರಾ.ಹೆ.169)ಮಂಗಳೂರು ಕಡೆಗೆ ಸಂಚರಿಸುವ ಘನ ವಾಹನಗಳು ವಾಮಂಜೂರು - ಪೆಮರ್ಂಕಿ ಪದವು ಜಿಲ್ಲಾ ಮುಖ್ಯ ರಸ್ತೆಯ ಮೂಲಕ ಕೆತ್ತಿಕ್ಕಲ್ ಅಥವಾ ಬೈತುರ್ಲಿ-ನೀರುಮಾರ್ಗ- ಕಲ್ಪನೆ ಜಿಲ್ಲಾ ಮುಖ್ಯರಸ್ತೆಯ ಮೂಲಕ ಬೈತುರ್ಲಿಯಲ್ಲಿ ಮಂಗಳೂರು-ಸೋಲಾಪುರ್ ರಾ.ಹೆ.169ನ್ನು ಸಂಪರ್ಕಿಸಿ ವಾಮಂಜೂರು (ರಾ.ಹೆ.169) ಮಂಗಳೂರಿಗೆ ಸಂಚರಿಸಬೇಕು.

ವಾಮಂಜೂರು (ರಾ.ಹೆ.169)ಮಂಗಳೂರು ಕಡೆಯಿಂದ ಮಲ್ಲೂರು ಕಡೆಗೆ ಸಂಚರಿಸುವ ಘನವಾಹನಗಳು ಮಂಗಳೂರು - ಸೋಲಾಪುರ್ ರಾ.ಹೆ.169ರ ಕೆತ್ತಿಕ್ಕಲ್‌ನಲ್ಲಿ ವಾಮಂಜೂರು-ಪೆಮರ್ಂಕಿ ಪದವು ಜಿಲ್ಲಾ ಮುಖ್ಯರಸ್ತೆ ಅಥವಾ ಮಂಗಳೂರು- ಸೋಲಾಪುರ್ ರಾ.ಹೆ.169ರ ಬೈತುರ್ಲಿಯಲ್ಲಿ ನೀರುಮಾರ್ಗ-ಕಲ್ಪನೆ ಜಿಲ್ಲಾ ಮುಖ್ಯರಸ್ತೆಯ ಮೂಲಕ ಸಂಚರಿಸಿ, ಪೆಮರ್ಂಕಿ ಪದವಿನಲ್ಲಿ ಪರಾರಿ-ಉಳಾಯಿಬೆಟ್ಟು-ಮಲ್ಲೂರು ಜಿಲ್ಲಾ ಮುಖ್ಯರಸ್ತೆಯನ್ನು ಸಂಪರ್ಕಿಸಿ ಮಲ್ಲೂರುಗೆ ಸಂಚರಿಸಬೇಕು ಎಂದು ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News