ಪುತ್ತೂರು: ಮೂವರು ಗಾಂಜಾ ವ್ಯಸನಿಗಳ ಬಂಧನ

Update: 2024-03-21 09:10 GMT

ಪುತ್ತೂರು:  ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ನಶೆಯಿಂದ ಅನುಚಿತವಾಗಿ ವರ್ತಿಸುತ್ತಿದ್ದ ಮೂವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬುಧವಾರ ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಪುತ್ತೂರು ನಗರದ ಕಸ್ಬಾ ನಿವಾಸಿಗಳಾದ ಕಲಂದರ್ ಶಾಹ್(41) ಬಿ. ಉಮ್ಮರ್ ಫಾರೂಕ್(36) ಮತ್ತು ಮಂಗಳೂರು ತಾಲೂಕಿನ ಮುಕ್ಕಚೇರಿ ಉಳ್ಳಾಲ ನಿವಾಸಿ ಕೆ. ಮೊಹಿದ್ದೀನ್(43) ಎಂದು ಗುರುತಿಸಲಾಗಿದೆ.

ಪುತ್ತೂರು ನಗರದ ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದ ಬಳಿ ಕಲಂದರ್ ಶಾಹ್‍ನನ್ನು ಹಾಗೂ ನಗರದ ಕಿಲ್ಲೆ ಮೈದಾನದಲ್ಲಿನ ಪುರಭವನದ ಬಳಿ ಉಮ್ಮರ್ ಫಾರೂಕ್ ಮತ್ತು ಕೆ. ಮೊಹಿದ್ದೀನ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆತ ನಿಷೇಧಿತ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದೆ.

ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News