ಖತರ್ ನಲ್ಲಿ ರಸ್ತೆ ಅಪಘಾತ: ಕಿನ್ನಿಗೋಳಿಯ ಯುವಕ ಮೃತ್ಯು

Update: 2024-08-14 16:15 GMT

ಮಂಗಳೂರು, ಆ.14: ದೋಹಾ - ಖತರ್ ನಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಿನ್ನಿಗೋಳಿ ಮೂಲದ ಯುವಕ ರಾಲ್ವಿನ್ ಡಿವೈನ್ ಡಿಕೋಸ್ತ (26) ಮೃತಪಟ್ಟಿರುವುದು ವರದಿಯಾಗಿದೆ.

ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿ ವಿಲ್ಮಾ ಡಿಕೋಸ್ತ ಮತ್ತು ರೆನಾಲ್ಡ್ ಡಿಕೋಸ್ತ ದಂಪತಿಯ ಪುತ್ರನಾಗಿರುವ ರಾಲ್ವಿನ್ ಖತರ್ ನಲ್ಲಿ ಉದ್ಯೋಗಿಯಾಗಿದ್ದರು. ಮಂಗಳವಾರ ರಾಲ್ವಿನ್ ಚಲಾಯಿಸುತ್ತಿದ್ದ ಕಾರು ಡಿವೈಡರ್‌ಗೆ ಢಿಕ್ಕಿಯಾಗಿ ಮೃತಪಟ್ಟಿದ್ದಾರೆ. ಅಪಘಾತರ ತೀವ್ರತೆಗೆ ಕಾರಿಗೆ ಬೆಂಕಿ ತಗಲಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News