ಪ್ರಾದೇಶಿಕ ವಿವರಗಳನ್ನು ಬಳಸಿಕೊಂಡು ಸಾರ್ವತ್ರಿಕಗೊಳಿಸುವುದು ಕೃತಿಕಾರರ ಮುಂದಿರುವ ಸವಾಲು: ಪ್ರೊ.ಚಿನ್ನಪ್ಪ ಗೌಡ

Update: 2024-08-25 07:33 GMT

ಮಂಗಳೂರು: ಪ್ರಾದೇಶಿಕ ವಿವರಗಳನ್ನು ಬಳಸಿಕೊಂಡು ಸಾರ್ವತ್ರಿಕ ಗೊಳಿಸುವುದು ಕೃತಿ ಕಾರರ ಮುಂದಿರುವ ಸವಾಲಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಚಿನ್ನಪ್ಪ ಗೌಡ ತಿಳಿಸಿದ್ದಾರೆ.

ಅವರು ಶನಿವಾರ ಆಕೃತಿ ಆಶಯ ಪಬ್ಲಿಕೇಶನ್ಸ್ ,ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗ ಇವರ ಸಹಯೋಗದೊಂದಿಗೆ ಸಾನಿಧ್ಯ ಸಭಾಂಗಣದಲ್ಲಿ ಸುಲೋಚನ ಪಚ್ಚಿನಡ್ಕ ಅವರ ಕೃತಿ ಗಳ ಬಿಡುಗಡೆ ಸಮಾರಂಭ ವನ್ನುದ್ದೇಶಿಸಿ ಮಾತನಾ ಡುತ್ತಿದ್ದರು.

ಡಾ.ಶಿವರಾಮ ಕಾರಂತರ ಕೃತಿಗಳಲ್ಲಿ ಸಾಕಷ್ಟು ಪ್ರಾದೇಶಿಕ ವಿವರಗಳು ದೊರೆತರೂ ಅವರ ಕೃತಿಗಳು ಪ್ರಾದೇಶಿ ಕವಾಗಿ ಸೀಮಿತಗೊಳ್ಳದೆ ಸಾರ್ವತ್ರಿಕ ವಿಚಾರಗಳನ್ನು ತಿಳಿಸುತ್ತದೆ.ಆದುದರಿಂದ ಆಚೆಗೆ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. ಯುವ ಬರಹಗಾರರ ವಿಸ್ತೃತ ವಾದ ಓದು ಬರವಣಿಗೆಯನ್ನು ಇನ್ನಷ್ಟು ಶಕ್ತಗೊಳಿಸುತ್ತದೆ

ಸುಲೋಚನ ಪಚ್ಚಿನಡ್ಕರವರ ಕೃತಿ ಪ್ರಾದೇಶಿಕ ವಿವರಗಳನ್ನು ಒಳಗೊಂಡಿದೆ ಅವರ ಬಿಸಿಲು ಕುದುರೆಯ ದಾರಿ,ಗೇನದ ಬೊಲ್ಪು,ಹಣತೆ, ಗುಟ್ಟು ಹೇಳುವ ಬದುಕು ಎಂಬ ನಾಲ್ಕು ಕೃತಿ ಜ್ಞಾನದ ಬೆಳಕಿನಲ್ಲಿ ಸಾಗುತ್ತದೆ ಅದು ಇನ್ನಷ್ಟು ವಿಸ್ತಾರವಾಗಲಿ ಎಂದು ಚಿನ್ನಪ್ಪ ಗೌಡ ವಿವರಿಸಿದರು.

ಸಮಾರಂಭದಲ್ಲಿ ಕೃತಿ ಪರಿಚಯಿಸಿದ ರಘು ಇಡ್ಕಿದು ಮಾತನಾಡುತ್ತಾ, ಸುಲೋಚನ ಪಚ್ಚಿನಡ್ಕ ಅವರ ಚುಟುಕು ಗಳು ಕಾವ್ಯ ಬಿಂದುವಾಗಿದೆ.ಅವರ ಕೃತಿಯಲ್ಲಿ ಹೆಣ್ಣಿನ ಬಗೆಗಿನ ಹೊಸ ಒಳ ನೋಟವಿದೆ. ಹೆಣ್ಣೆಂದರೆ ಸುಟ್ಟರೂ ಮತ್ತೆ ಚಿಗುರುವ ಗುಣ ಇದೆ ಕವಿತೆಯಲ್ಲಿ ಪ್ರತಿಪಾದಿಸಿದ್ದಾರೆ.ಬದುಕಿನ ವಿವಿಧ ಆಯಾಮಗಳ ಸುತ್ತ ತೆರೆದುಕೊಳ್ಳುವ ಅವರ ಕವಿತೆಗಳು ನಮಗೆ ಆಪ್ತವಾಗುತ್ತದೆ ಎಂದರು.

ಡಾ.ಯೋಗೀಶ್ ಕೈರೋಡಿ ಕೃತಿ ಪರಿಚ ಯಿಸಿ ಸುಲೋಚನಾ ಪಚ್ಚಿನಡ್ಕ ಅವರ ಬಿಸಿಲು ಕುದುರೆಯ ದಾರಿ ಕಾದಂಬರಿ ಕಾರಂತರ ಸರಸಮ್ಮನ ಸಮಾಧಿಯ ಮಾದರಿಯ ವಿಶಿಷ್ಟ ಕೃತಿಯಾಗಿದೆ

ಎಂದರು. ಕೃತಿ ರಚಿಸಿದ ಸುಲೋಚನ ಪಚ್ಚಿನಡ್ಕ ಮಾತನಾಡುತ್ತಾ,ನನ್ನ ಕೃತಿ ರಚನೆಯ 23 ವರುಷಗಳ ನನ್ನ ಬದುಕು,ನಾನು ಕೇಳಿದ ಸಂಗತಿಗಳನ್ನು ನನ್ನ ಬರಹಗಳನ್ನು ಒಳಗೊಂಡಿದೆ.ಈ ಕೃತಿ ರಚನೆಗೆ ಗುರುಗಳು, ಹಿತೈಷಿಗಳ ಪ್ರೇರಣೆ ಇದೆ ಎಂದರು.

ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಮಹಾಲಿಂಗ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಆಕೃತಿ ಪ್ರಕಾಶನದ ಕಲ್ಲೂರು ನಾಗೇಶ್ ಸ್ವಾಗತಿಸಿದರು.ಸುಲೋಚನ ಪಚ್ಚಿನಡ್ಕ ವಂದಿಸಿದರು. ಡಾ.ದಿನೇಶ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News