ವ್ಯಕ್ತಿ ನಾಪತ್ತೆ

Update: 2023-11-04 15:56 GMT

ಮಂಗಳೂರು: ತೊಕ್ಕೊಟ್ಟು ಸಮೀಪದ ಕುಂಪಲದ ಸರಳಾಯ ಕಾಲನಿಯಲ್ಲಿ ವಾಸವಾಗಿದ್ದ ಚಿತ್ತರಂಜನ್ ಭಾಸ್ಕರ ಪೂಜಾರಿ (55) ಎಂಬವರು ಸೆ.7ರಿಂದ ಕಾಣೆಯಾದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅವಿವಾಹಿತರಾಗಿದ್ದ ಚಿತ್ತರಂಜನ್ ಭಾಸ್ಕರ ಪೂಜಾರಿ ಮುಂಬೈಯಲ್ಲಿ ಉದ್ಯೋಗದಲ್ಲಿದ್ದವರು ಕಳೆದ 3 ವರ್ಷಗಳಿಂದ ಕುಂಪಲ ತನ್ನ ತಂಗಿ ಆಶಾ ಮನೆಯಲ್ಲಿ ವಾಸವಾಗಿದ್ದರು. ನಗರದ ಎಕ್ಕೂರಿನಲ್ಲಿರುವ ಫಿಶರೀಸ್ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಿತ್ತರಂಜನ್ ಅಮಲು ಪದಾರ್ಥ ಸೇವಿಸುವ ಅಭ್ಯಾಸವನ್ನು ಹೊಂದಿದ್ದ ಕಾರಣ ಸೆ.7ರಿಂದ ಕೆಲಸದಿಂದ ವಜಾ ಮಾಡಲಾಗಿತ್ತು. ಅದರಂತೆ ಚಿತ್ತರಂಜನ್ ಆ ದಿನ ಸಂಜೆ 4ಕ್ಕೆ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೋದವರು ಈ ತನಕ ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಕೂಡ ಸ್ವಿಚ್ಡ್‌ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News