ಎರಡು ಅಂಗಡಿಗಳಲ್ಲಿ ಕಳವು

Update: 2023-09-20 17:22 GMT

ಮಂಗಳೂರು, ಸೆ.20: ನಗರದ ಭಾರತ್ ಬೀಡಿ ಜಂಕ್ಷನ್ ಬಳಿ ಇರುವ ಎರಡು ಅಂಗಡಿಗಳಿಂದ ಕಳ್ಳರು ನುಗ್ಗಿ ನಗದು ಮತ್ತು ಸಹಸ್ರಾರು ಮೌಲ್ಯದ ವಸ್ತುಗಳನ್ನು ಕಳವುಗೈದ ಘಟನೆ ವರದಿಯಾಗಿದೆ.

ಪ್ರಕೃತಿ ಕಾಂಪ್ಲೆಕ್ಸ್‌ನಲ್ಲಿ ಸ್ಕೈನೆಟ್ ಎಂಬ ಮೊಬೈಲ್, ಲಾಪ್ ಟ್ಯಾಪ್ ಸಿಸಿ ಟಿವಿ ಸೇಲ್ಸ್ ಮತ್ತು ಸರ್ವೀಸ್ ಸುಜಿತ್ ಸಾಲ್ಯಾನ್ ಎಂಬವರು ಒಂದು ವರ್ಷದಿಂದ ಈ ಅಂಗಡಿಯನ್ನು ಸ್ನೇಹಿತ ಶಬರೀಶ್ ನಾಯಕ್ ಎಂಬವರೊಂದಿಗೆ ಸೇರಿ ನಡೆಸುತ್ತಿದು, ಸೆ.18ರಂದು ಸಂಜೆ ಸುಮಾರು 18:30 ಗಂಟೆಗೆ ಎಂದಿನಂತೆ ಅಂಗಡಿಯನ್ನು ಬಾಗಿಲು ಹಾಕಿ ಮನೆಗೆ ಹೋಗಿದ್ದು. ತಡರಾತ್ರಿ ಕಳ್ಳತನ ಸಂಭವಿಸಿದೆ ಎನ್ನಲಾಗಿದೆ.

ಅಂಗಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಸೇಲ್ಸ್ ಕೌಂಟರ್‌ನಲ್ಲಿ ಇಟ್ಟಿದ್ದ ಇಯರ್ ಫೋನ್, ಇಯರ್ ಬಟ್ಸ್, ಒಂದು ಸ್ಮಾರ್ಟ್ ವಾಚ್, ಕಂಪ್ಯೂಟರ್ ಮೌಸ್, ಸಿಸಿ ಕ್ಯಾಮರಾ, ಹಾಗೂ ಕ್ಯಾಶ್ ಡ್ರಾಯರ್ ನಲ್ಲಿದ್ದ ನಗದು ರೂ 4,500 ರೂ.ವನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತು ಹಾಗೂ ನಗದು ಮೌಲ್ಯ ಒಟ್ಟು ಸುಮಾರು 15000 ರೂ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಇದೇ ಅಂಗಡಿಯ ಪಕ್ಕದ ಫೊಟೋ ಫ್ರೇಮ್ ನ ಫ್ರೇಮ್ ಇಟ್ ಎಂಬ ಹೆಸರಿನ ಅಂಗಡಿಯ ಶಟರ್ ಬಾಗಿಲು ಬೀಗ ಮುರಿದು ಒಳಗಿನ ಗ್ಲಾಸ್ ಬಾಗಿಲನ್ನು ಒಡೆದು ಒಳಗೆ ಹೋಗಿ ಅವರ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿಟ್ಟಿದ್ದ ನಗದು ರೂ 3000 ಹಾಗೂ ಮೊಬೈಲ್ ಒಂದನ್ನು ಕೂಡ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸೊತ್ತು ಮತ್ತು ನಗದು ಮೌಲ್ಯ ಒಟ್ಟು ರೂ 6,000 ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News