ದ.ಕ.ಜಿಲ್ಲೆಯ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ

Update: 2023-08-01 17:19 GMT

ಮಂಗಳೂರು: ರಾಜ್ಯ ಸರಕಾರವು ಮಂಗಳವಾರ 211 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿದೆ. ಈ ಪೈಕಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಂಚಾರ ಪೂರ್ವ (ಕದ್ರಿ) ಠಾಣೆಯ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಗೆ, ಬಂಟ್ವಾಳದ ವಿವೇಕಾನಂದ ಅವರನ್ನು ರಾಜ್ಯ ಗುಪ್ತ ವಾರ್ತೆಗೆ, ಮಂಗಳೂರು ಸೆನ್ ಠಾಣೆಯ ಸವಿತ್ರ ತೇಜ ಅವರನ್ನು ಬೈಂದೂರು ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

ಮೂಡುಬಿದಿರೆ ನಿರಂಜನ್ ಕುಮಾರ್‌ರನ್ನು ಬಜ್ಪೆಗೆ, ಸುಳ್ಯದ ನವೀನ್ ಚಂದ್ರ ಜೋಗಿ ಅವರನ್ನು ಉಡುಪಿ ಸೆನ್ ಠಾಣೆಗೆ, ಕೊಣಾಜೆಯ ಪ್ರಕಾಶ್ ದೇವಾಡಿಗ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕದ್ರಾ ಠಾಣೆಗೆ, ಬಂದರ್‌ನ ರಾಘವೇಂದ್ರ ಬೈಂದೂರ್ ಅವರನ್ನು ಕದ್ರಿಗೆ, ಉರ್ವದ ಭಾರತಿ ಅವರನ್ನು ಬಂದರ್‌ಗೆ, ಪಾಂಡೇಶ್ವರದ ಮಂಜುನಾಥ್ ಎಂ. ಅವರನ್ನು ಕೊಡಗಿನ ಶನಿವಾರ ಸಂತೆ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News