ಎರಡು ದ್ವಿಚಕ್ರ ವಾಹನ ಕಳವು

Update: 2023-10-31 16:24 GMT

ಸಾಂದರ್ಭಿಕ ಚಿತ್ರ

ಮಂಗಳೂರು, ಅ.31:ಮಂಗಳೂರು ಗ್ರಾಮಾಂತರ ಮತ್ತು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಎರಡು ದ್ವಿಚಕ್ರ ವಾಹನ ಕಳವಾದ ಬಗ್ಗೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮೆರ್ವಿನ್ ಸುನೀಲ್ ಪಿಂಟೋ ಎಂಬವರು ಅ.30ರಂದು ವಾಮಂಜೂರು ಚರ್ಚ ಎದುರು ಇರುವ ಅಂಗಡಿಯ ಹೊರಗಡೆ ಸ್ಕೂಟರ್ ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. 10 ನಿಮಿಷ ಬಿಟ್ಟು ವಾಪಸ್ ಬಂದು ನೋಡಿದಾಗ ದ್ವಿಚಕ್ರ ವಾಹನ ಕಳವಾಗಿದೆ. ಇದರ ಬೆಲೆ 25 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ.

*ನಗರದ ಪಡೀಲ್‌ನ ಶೋರೂಮ್‌ವೊಂದರ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳವಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ತಿಕ್ ಸತೀಶ್ ಪೂಜಾರಿ ಅ.27ರಂದು ಬೆಳಗ್ಗೆ ತನ್ನ ಡಿಯೋ ಸ್ಕೂಟರನ್ನು ಟೊಯೋಟಾ ಶೋ ರೂಮ್ ಎದುರು ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ಸಂಜೆ 6:30ಕ್ಕೆ ಬಂದಾಗ ಸ್ಕೂಟರ್ ಕಳವಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News