ಚುನಾವಣಾ ಬಾಂಡ್‌ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಅತಿ ದೊಡ್ಡ ಹಗರಣ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರ ಪತಿ ಪರಕಾಲ ಪ್ರಭಾಕರ್‌

Update: 2024-03-27 08:04 GMT

ಪರಕಾಳ ಪ್ರಭಾಕರ್‌ 

ಹೊಸದಿಲ್ಲಿ: “ಚುನಾವಣಾ ಬಾಂಡ್‌ ಹಗರಣವು ಭಾರತದ ಅತಿ ದೊಡ್ಡ ಹಗರಣ ಮಾತ್ರವಲ್ಲ, ಜಗತ್ತಿನಲ್ಲೇ ಅತಿ ದೊಡ್ಡ ಹಗರಣವಾಗಿದೆ.” ಎಂದು ಚಿಂತಕ, ಖ್ಯಾತ ರಾಜಕೀಯ ವಿಶ್ಲೇಷಕ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ ಪರಕಾಳ ಪ್ರಭಾಕರ್‌ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ಈ ಹಗರಣವು ಆಡಳಿತ ಪಕ್ಷದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಹಾಗೂ ಈಗ ಈ ಹಗರಣದ ಬಗ್ಗೆ ಜನರಲ್ಲೂ ಅರಿವು ಮೂಡುತ್ತಿದೆ ಎಂದು ಹೇಳಿದ್ದಾರೆ.

ಈ ಚುನಾವಣಾ ಬಾಂಡ್‌ ವಿಚಾರವು ಬಿಜೆಪಿ ಮತ್ತು ಇತರ ಪಕ್ಷಗಳ ನಡುವಿನ ಹೋರಾಟವಾಗಿರದೆ, ಬಿಜೆಪಿ ಮತ್ತು ಜನಸಾಮಾನ್ಯರ ನಡುವಿನ ಹೋರಾಟವಾಗಲಿದೆ ಎಂದು ಅವರು ಹೇಳಿದೆ.

ಬಿಜೆಪಿಯ ನಿರೀಕ್ಷೆಗೂ ಮೀರಿ ಈ ವಿಚಾರ ಅದರ ಕೈತಪ್ಪಿ ಹೋಗಿದೆ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News