ಕೇರಳದಲ್ಲಿ ಪ್ರವಾಹ ಭೀತಿ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಲವು ನದಿಗಳು

Update: 2024-07-30 10:28 GMT

                                                                   Photo Credit: The Hindu

ತಿರುವನಂತಪುರಂ: ಕೇರಳದಾದ್ಯಂತ ಇರುವ ನದಿಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿಕೆಯಾಗುವ ಸಂಭವ ಇರುವುದರಿಂದ, ಕೇಂದ್ರ ಜಲ ಆಯೋಗವು ರಾಜ್ಯದ ವಿವಿಧ ನದಿಗಳಿಗೆ ‌ಯೆಲ್ಲೋ ಮತ್ತು ಆರೆಂಜ್ ಅಲರ್ಟ್ ಅನ್ನು ಘೋಷಿಸಿದೆ.

ಎರ್ನಾಕುಲಂನ ಕಲಿಯಾರ್, ತ್ರಿಶೂರ್ ನ ಕೀಚೇರಿ, ಪಾಲಕ್ಕಾಡ್ ನ ಪುಲಂತೋಡ್ ಹಾಗೂ ಕೋಯಿಕ್ಕೋಡ್ ನ ಕುಟ್ಟಿಯಾಡಿ ನದಿಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ತಿರುವನಂತಪುರಂನ ಕರಮನ, ಪಟ್ಟಣಂತಿಟ್ಟದ ಪಂಪ, ಇಡುಕ್ಕಿಯ ತೋಡುಪುಳ, ತ್ರಿಶೂರ್ ನ ಗಾಯತ್ರಿ ಹಾಗೂ ಚಲಕುಡಿ, ಮಲಪ್ಪುರಂನ ಚಲಿಯಾರ್ ಹಾಗೂ ಮಲಪ್ಪುರಂನ ಕುತ್ತಿರಪ್ಪುಳ ನದಿಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈ ನದಿಗಳ ಪಾತ್ರದಲ್ಲಿ ವಾಸಿಸುತ್ತಿರುವ ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News