ಚುನಾವಣಾ ಗೆಲುವಿನ ನಂತರ ಮೊದಲ ‌ʼಮನ್‌ ಕಿ ಬಾತ್ʼ ಕಾರ್ಯಕ್ರಮ ನಡೆಸಿದ ಪ್ರಧಾನಿ ಮೋದಿ

Update: 2024-06-30 06:35 GMT

Photo: indiatoday.in

ಹೊಸದಿಲ್ಲಿ: ಸತತ ಮೂರನೆಯ ಬಾರಿ ಎನ್‌ಡಿಎ ಸರಕಾರವನ್ನು ಚುನಾಯಿಸಿದ ಮತದಾರರಿಗೆ ಧನ್ಯವಾದ ಸಲ್ಲಿಸಿರುವ ಪ್ರಧಾನಿ ನರೇಂದ್ರ ಮೋದಿ, ಸಂವಿಧಾನದ ಬಗ್ಗೆ ಅಚಲ ವಿಶ್ವಾಸ ಪ್ರದರ್ಶಿಸಿರುವ ಮತದಾರರನ್ನು ಅಭಿನಂದಿಸಿದ್ದಾರೆ.

ಮೂರನೆಯ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನಂತರ ತಮ್ಮ ಮನದ ಮಾತು ಕಾರ್ಯಕ್ರಮವನ್ನು ಇಂದು ಪುನಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಪ್ರಮುಖ ವಿಷಯಗಳು ಕುರಿತು ನಾಗರಿಕರೊಂದಿಗೆ ನೇರ ಮಾತುಕತೆ ನಡೆಸಿದರು. ಅವರು ಮೂರನೆಯ ಬಾರಿಗೆ ಪ್ರಧಾನಿಯಾದ ನಂತರ ಪ್ರಸ್ತುತ ಪಡಿಸಿದ ಮೊದಲ ಮನದ ಮಾತು ಕಾರ್ಯಕ್ರಮ ಇದಾಗಿದೆ.

ಜನರು ಸಂವಿಧಾನ ಹಾಗೂ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆ ಬಗ್ಗೆ ತಮ್ಮ ದೃಢ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ಮೋದಿ ಪ್ರತಿಪಾದಿಸಿದರು.

ಫೆಬ್ರವರಿ 25ರ ನಂತರ ಸ್ಥಗಿತಗೊಂಡಿದ್ದ ಮನದ ಮಾತು ಕಾರ್ಯಕ್ರಮ, ಸುಮಾರು ನಾಲ್ಕು ತಿಂಗಳ ನಂತರ ಇಂದು ಮತ್ತೆ ಪುನಾರಂಭಗೊಂಡಿತು.

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News