ಬಿಆರ್‌ಎಸ್ ಶಾಸಕನ ಕಚೇರಿಗಳ ಮೇಲೆ ಈಡಿ ದಾಳಿ

Update: 2024-06-20 06:52 GMT

ಸಾಂದರ್ಭಿಕ ಚಿತ್ರ

ಹೈದರಾಬಾದ್: ಕಾನೂನು ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳು ಗುರುವಾರ ತೆಲಂಗಾಣ ಬಿಆರ್‌ಎಸ್ ಶಾಸಕ ಗುಡೇಮ್ ಮಹಿಪಾಲ ರೆಡ್ಡಿ ಮತ್ತು ಅವರ ಸಹೋದರ ಗುಡೇಮ್ ಮಧುಸೂಧನ ರೆಡ್ಡಿಯವರಿಗೆ ಸೇರಿದ ಹಲವು ಕಚೇರಿಗಳಲ್ಲಿ ಶೋಧ ಕಾರ್ಯ ಕೈಗೊಂಡರು.

ಅಕ್ರಮ ಗಣಿಗಾರಿಕೆ ಸಂಬಂಧಿತ ಹಣ ದುರುಪಯೋಗ ಪ್ರಕರಣದ ಸಂಬಂಧ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಹಿಪಾಲ ರೆಡ್ಡಿ ರಾಜ್ಯ ವಿಧಾನಸಭೆಯಲ್ಲಿ ಪತಂಚೇರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

ಮಹಿಪಾಲ ರೆಡ್ಡಿಯವರ ಗಣಿಗಾರಿಕೆ ಕಂಪನಿಗೆ ಸೇರಿದ ಏಳೆಂಟು ಕಡೆಗಳಲ್ಲಿ ದಾಳಿ ನಡದಿದೆ. ಅಕ್ರಮ ಗಣಿಗಾರಿಕೆ ಸಂಬಂಧ ರಾಜ್ಯ ಪೊಲೀಸರು ದಾಖಲಿಸಿರುವ ಎಫ್‍ಐಆರ್ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಮಧುಸೂಧನ ರೆಡ್ಡಿಯವರನ್ನು ಕಳೆದ ಮಾರ್ಚ್‍ನಲ್ಲಿ ತನಿಖೆಯ ಅಂಗವಾಗಿ ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News