ಸಹನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಮೃತಪಟ್ಟ ಕೆಲವೇ ದಿನಗಳ ಬಳಿಕ ಕಿರುತೆರೆ ನಟ ಚಂದ್ರಕಾಂತ್‌ ಆತ್ಮಹತ್ಯೆ

Update: 2024-05-18 06:20 GMT

ಪವಿತ್ರಾ ಜಯರಾಂ ,  ಚಂದ್ರಕಾಂತ್‌

ಹೈದರಾಬಾದ್: ಖ್ಯಾತ ಕಿರುತೆರೆ ನಟ, ಚಂದು ಎಂದೇ ಜನಪ್ರಿಯರಾಗಿರುವ ಚಂದ್ರಕಾಂತ್‌ ರಂಗಾರೆಡ್ಡಿಯ ಅಲ್ಕಾಪುರ ಎಂಬಲ್ಲಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರ ಆತ್ಮೀಯ ಗೆಳತಿ, ಸಹನಟಿ ಪವಿತ್ರಾ ಜಯರಾಂ ಅವರು ಕಾರು ಅಪಘಾತವೊಂದರಲ್ಲಿ ಮೃತಪಟ್ಟ ಕೆಲವೇ ದಿನಗಳಲ್ಲಿ ಚಂದ್ರಕಾಂತ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಟಿವಿ ಧಾರಾವಾಹಿ ತ್ರಿಣಯಣಿ ಮೂಲಕ ಖ್ಯಾತಿ ಪಡೆದಿದ್ದ ಚಂದ್ರಕಾಂತ್‌ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದೇ ಮನೆಯಲ್ಲಿ ಅವರು ಹಿಂದೆ ಪವಿತ್ರಾ ಜೊತೆ ವಾಸಿಸುತ್ತಿದ್ದರು. ಪವಿತ್ರಾ ಅವರ ಅಕಾಲಿಕ ನಿಧನದಿಂದ ಚಂದ್ರಕಾಂತ್‌ ಮಾನಸಿಕವಾಗಿ ಜರ್ಝರಿತರಾಗಿದ್ದರೆಂದು ತಿಳಿದು ಬಂದಿದೆ.

ಪವಿತ್ರಾ ಜಯರಾಂ ಅವರು ಪ್ರಯಾಣಿಸುತ್ತಿದ್ದ ಹಾಗೂ ಅಪಘಾತಕ್ಕೀಡಾಗಿದ್ದ ಕಾರಿನಲ್ಲಿ ಚಂದ್ರಕಾಂತ್‌ ಕೂಡ ಅವರ ಜೊತೆಗಿದ್ದರು. ಪವಿತ್ರಾ ಜೊತೆಗೆ ವಿವಾಹವಾಗುವ ಇಂಗಿತವನ್ನೂ ಈ ಹಿಂದೆ ಚಂದ್ರಕಾಂತ್‌ ತಮ್ಮ ಆತ್ಮೀಯರಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ಚಂದ್ರಕಾಂತ್‌ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಚಂದ್ರಕಾಂತ್‌ ಸಾವಿನ ಕುರಿತಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News