ವಾಮಾಚಾರದ ಶಂಕೆ | ಇಬ್ಬರು ಆದಿವಾಸಿ ಮಹಿಳೆಯರನ್ನು ಥಳಿಸಿ ಹತ್ಯೆ : 15 ಮಂದಿ ಬಂಧನ

Update: 2024-09-14 13:25 GMT

   ಸಾಂದರ್ಭಿಕ ಚಿತ್ರ

ಸುರಿ (ಪಶ್ಚಿಮ ಬಂಗಾಳ) : ವಾಮಾಚಾರ ನಡೆಸುತ್ತಿದ್ದಾರೆಂಬ ಶಂಕೆಯ ಮೇಲೆ ಇಬ್ಬರು ಮಧ್ಯ ವಯಸ್ಕ ಮಹಿಳೆಯರನ್ನು ಥಳಿಸಿ ಹತ್ಯೆಗೈದಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ಇಬ್ಬರು ಆದಿವಾಸಿ ಮಹಿಳೆಯರ ಮೃತದೇಹಗಳು ಮಯೂರೇಶ್ವಳರ್ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಸಾರ ಗ್ರಾಮದಲ್ಲಿನ ಕೃಷಿ ನಾಲೆಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.

ಈ ಘಟನೆಗೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ.

ಜನರ ಗುಂಪೊಂದು ರಾತ್ರಿ ನಮ್ಮನ್ನು ಮನೆಯಿಂದ ಹೊರಗೆ ಕರೆದ ನಂತರ, ನಮ್ಮನ್ನು ಹಗ್ಗಗಳಿಂದ ಕಟ್ಟಿ ಹಾಕಿ, ದೊಣ್ಣೆಗಳಿಂದ ಥಳಿಸಿತು ಎಂದು ಮೃತ ಮಹಿಳೆಯರ ಕುಟುಂಬದ ಸದಸ್ಯರಾದ ಲಾಡ್ಜಿ ಕಿಸ್ಕು ಹಾಗೂ ಡಾಲಿ ಸೊರೇನ್ ಆರೋಪಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೆ ಗ್ರಾಮಕ್ಕೆ ದೊಡ್ಡ ಸಂಖ್ಯೆಯಲ್ಲಿ ಧಾವಿಸಿದ ಪೊಲೀಸರು, ಘಟನೆಯ ಸಂಬಂಧ 15 ಮಂದಿಯನ್ನು ಬಂಧಿಸಿದ್ದಾರೆ.

ಮೃತ ಮಹಿಳೆಯರ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News