ಉ.ಪ್ರ: ದಲಿತ ಬಾಲಕನಿಗೆ ಥಳಿತ, ಬಲವಂತದಿಂದ ಮೂತ್ರಪಾನ, ಮೂವರು ಆರೋಪಿಗಳ ಬಂಧನ

Update: 2024-07-12 14:03 GMT

ಸಾಂದರ್ಭಿಕ ಚಿತ್ರ

ಶ್ರಾವಸ್ತಿ : ಎರಡು ದಿನಗಳ ಹಿಂದೆ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ 15ರ ಹರೆಯದ ದಲಿತ ಬಾಲಕನೋರ್ವನಿಗೆ ಬಲವಂತದಿಂದ ಮೂತ್ರವನ್ನು ಸೇವಿಸುವಂತೆ ಮಾಡಿದ್ದಕ್ಕಾಗಿ ಮೂವರು ಯುವಕರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಸಂತ್ರಸ್ತ ಬಾಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸೌಂಡ್ ಮಿಕ್ಸರ್ ಗಳು ಮತ್ತು ಆಡಿಯೊ ಸಿಸ್ಟಮ್ ಗಳನ್ನು ಅಳವಡಿಸುವ ಕೆಲಸವನ್ನು ಮಾಡುತ್ತಿದ್ದಾನೆ.

ಮಂಗಳವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ಬಾಲಕನನ್ನು ಪಾನಮತ್ತರಾಗಿದ್ದ ಕಿಶನ ತಿವಾರಿ, ದಿಲೀಪ ಮಿಶ್ರಾ ಮತ್ತು ಸತ್ಯಂ ತಿವಾರಿ ಎನ್ನುವವರು ತಡೆದು ನಿಲ್ಲಿಸಿದ್ದರು. ಪೋಲಿಸರ ಪ್ರಕಾರ ಸತ್ಯಂ ಮತ್ತು ಕಿಶನ್ ಬಾಲಕನನ್ನು ನೆಲಕ್ಕೆ ಅದುಮಿ ಹಿಡಿದಿದ್ದು, ಮಿಶ್ರಾ ಬಾಟ್ಲಿಯೊಂದರಲ್ಲಿ ಮೂತ್ರವನ್ನು ವಿಸರ್ಜಿಸಿ ಅದನ್ನು ಬಲವಂತದಿಂದ ಆತನಿಗೆ ಕುಡಿಸಿದ್ದ.

ಆರೋಪಿಗಳು ತಮ್ಮ ಮನೆಯಲ್ಲಿ ಕಾರ್ಯಕ್ರಮದ ಸಂದರ್ಭದಲ್ಲಿ ಅಳವಡಿಸಲಾಗಿದ್ದ ಆಡಿಯೊ ಸಿಸ್ಟಮ್ ಗೆ ಬಾಲಕನ ಕುಟುಂಬವು ಹೆಚ್ಚುವರಿ ಶುಲ್ಕವನ್ನು ವಸೂಲು ಮಾಡಿದ್ದಕ್ಕಾಗಿ ಅಸಮಾಧಾನಗೊಂಡಿದ್ದರು ಎನ್ನಲಾಗಿದೆ.

ಆರೋಪಿಗಳು ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದರು ಮತ್ತು ಆತನನ್ನು ಥಳಿಸಿದ್ದರು. ಅವರ ಪೈಕಿ ಓರ್ವ ಇಡೀ ಘಟನೆಯನ್ನು ವೀಡಿಯೊ ಚಿತ್ರೀಕರಿಸಿದ್ದ ಎಂದು ಪೋಲಿಸರು ತಿಳಿಸಿದರು.

ಮನೆಗೆ ಮರಳಿದ ಬಾಲಕ ತನ್ನ ಸಂಕಷ್ಟವನ್ನು ಹೇಳಿಕೊಂಡಿದ್ದು, ಮರುದಿನ ಆತನ ಪೋಷಕರು ಪೋಲಿಸ್ ದೂರನ್ನು ದಾಖಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News