ವಿಶಾಖಪಟ್ಟಣ: ಅಗ್ನಿ ದುರಂತದಲ್ಲಿ 10 ಜನರಿಗೆ ಗಾಯ

Update: 2016-05-24 16:51 GMT

ವಿಶಾಖಪಟ್ಟಣಂ,ಮೇ 24: ನಗರದ ಹೊರವಲಯದ ಪರವಾಡಾದಲ್ಲಿರುವ ಜವಾಹರಲಾಲ್ ನೆಹರೂ ಫಾರ್ಮಾ ಸಿಟಿಯಲ್ಲಿನ ಔಷಧಿ ತಯಾರಿಕೆ ಕಂಪೆನಿಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 10 ಕಾರ್ಮಿಕರು ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಎಲ್ಲ ಗಾಯಾಳುಗಳನ್ನು ಇಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಫಾರ್ಮಾ ಸಿಟಿಯಲ್ಲಿನ ಶ್ರೀಕರ್ ಲ್ಯಾಬೋರೇಟರೀಸ್‌ನಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹಿಸಿಡಲಾಗಿದ್ದ ಟ್ಯಾಂಕ್‌ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ. ಅದರ ಬಳಿಯಲ್ಲಿಯೇ ಇದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರೆ, ಸಮೀಪದ ಗೋಡೆ ಕುಸಿದು ಇತರ ಎಂಟು ಜನರು ಗಾಯಗೊಂಡರು. ಉಳಿದ ಕಾರ್ಮಿಕರು ಸುರಕ್ಷಿತ ಸ್ಥಳಕ್ಕೆ ಧಾವಿಸುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News