ಲೈಂಗಿಕ ಕಿರುಕುಳಕ್ಕೀಡಾದ ಬುದ್ಧಿಮಾಂದ್ಯ ಬಾಲಕಿಯನ್ನು ಆಸ್ಪತ್ರೆಯಲ್ಲಿ ಸಂದರ್ಶಿಸಿದ ಕೇಜ್ರಿವಾಲ್

Update: 2016-05-26 10:23 GMT

ಹೊಸದಿಲ್ಲಿ,ಮೇ 26: ದಿಲ್ಲಿಯಲ್ಲಿ ಕ್ರೂರ ಕಿರುಕುಳಕ್ಕೊಳಗಾಗಿ ಆಸ್ಪತ್ರೆಯಲ್ಲಿರುವ 13 ವರ್ಷದ ಬಾಲಕಿಯನ್ನು ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಆಸ್ಪತ್ರೆಗೆ ತೆರಳಿ ಸಂದರ್ಶಿಸಿದ್ದಾರೆ. ಬುದ್ಧಿಮಾಂದ್ಯ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟು ನಂತರ ರೈಲು ಟ್ರ್ಯಾಕ್‌ನಲ್ಲಿ ತೊರೆದು ಹೋದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಏಂಸ್ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರ ಚಿಕಿತ್ಸೆಗೊಳಗಾಗಿರುವ ಬಾಲಕಿಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ.

ಮೇ 18ಕ್ಕೆ ದಿಲ್ಲಿಯ ಫುಲ್ ಪ್ರಹ್ಲಾದ್ ಪುರದಲ್ಲಿ ಈ ಘಟನೆ ನಡೆದಿತ್ತು. ಬದರ್‌ಪುರ ಗ್ರಾಮದಿಂದ ಮೇ 17ಕ್ಕೆ ಕಾಣೆಯಾಗಿದ್ದ ಬಾಲಕಿ ಅಪ್ರಜ್ಞಾ ಸ್ಥಿತಿಯಲ್ಲಿ ರೈಲ್ವೆ ಸ್ಟೇಶನ್‌ನ ಬಳಿ ಪತ್ತೆಯಾಗಿದ್ದಳು. ಬಾಲಕಿಯ ನೆರೆಯ ಹದಿಹರೆಯದ ಯುವಕ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿ. ಈತನನ್ನು ನಿನ್ನೆ ಪೊಲೀಸರು ಬಂಧಿಸಿದ್ದರು. ದಿಲ್ಲಿಯಲ್ಲಿ ಕಾನೂನು ವ್ಯವಸ್ಥೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಗ್ರಹಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆಂದು ಅವರನ್ನು ಭೇಟಿಯಾದ ನಂತರ ಕೇಜ್ರಿವಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News