ಕೇರಳದ ಬೆಸ್ತರ ಹತ್ಯಾಪ್ರಕರಣದಲ್ಲಿ ಕೇಂದ್ರ ನಾಟಕವಾಡುತ್ತಿದೆ: ಪಿಣರಾಯಿ

Update: 2016-05-26 10:53 GMT

ತಿರುವನಂತಪುರಂ,ಮೇ 26: ಸಮುದ್ರ ಕೊಲೆ(ಮೀನುಗಾರರ ಹತ್ಯಾ ಪ್ರಕರಣ) ಕೇಸಿನಲ್ಲಿ ಕೇಂದ್ರ ಸರಕಾರ ನಾಟಕವಾಡುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇಟಲಿಗೆ ಅನುಕೂಲಕರವಾದ ನಿಲುವನ್ನು ಕೇಂದ್ರ ಸರಕಾರ ಕೋರ್ಟ್‌ನಲ್ಲಿ ವ್ಯಕ್ತಪಡಿಸಿದೆ. ಈ ಕ್ರಮವನ್ನು ಸಿಪಿಎಂ ಶಕ್ತಿಶಾಲಿಯಾಗಿ ಟೀಕಿಸಿದೆ. ಕೇಸಿನಲ್ಲಿ ಕೇಂದ್ರಸರಕಾರ ತಪ್ಪಾದ ನಿಲುವನ್ನು ತಳೆದದ್ದೇ ಕೊಲೆ ಆರೋಪಿ ಇಟಲಿಯ ನಾವಿಕನನ್ನು ಸ್ವದೇಶಕ್ಕೆ ಮರಳಲು ಸುಪ್ರೀಂಕೋರ್ಟ ಅವಕಾಶವೊದಗಿಸಲು ಕಾರಣವಾಯಿತು ಎಂದು ಪಿಣರಾಯಿ ಪ್ರತಿಕ್ರಿಯಿಸಿದ್ದಾರೆ.

ಚುನಾವಣಾ ಫಲಿತಾಂಶ ನಂತರ ಉಂಟಾದ ಅಹಿತಕರ ಘಟನೆಗಳ ಕುರಿತ ಪ್ರಶ್ನೆಗೆ ಉತ್ತರಿಸುತ್ತಾ ಕೇರಳದಲ್ಲಿ ಇಂತಹ ಘಟನೆಗಳು ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News