ಮಹಾರಾಷ್ಟ್ರ ಬಿಜೆಪಿಯಲ್ಲಿ ತಳಮಳ: ಖಡ್ಸೆಯನ್ನು ಬೆಂಬಲಿಸಿ ಜಲಗಾಂವ್‌ನ 14 ಕಾರ್ಪೊರೇಟರ್‌ಗಳ ರಾಜೀನಾಮೆ

Update: 2016-06-06 18:25 GMT

ಮುಂಬೈ,ಜೂ.6: ಭ್ರಷ್ಟಾಚಾರ ಮತ್ತು ದಾವೂದ್ ಇಬ್ರಾಹೀಂ ಜೊತೆ ಸಂಬಂಧ ಹೊಂದಿರುವ ಆರೋಪಗಳ ಹಿನ್ನೆಲೆಯಲ್ಲಿ ಅಧಿಕಾರ ತ್ಯಜಿಸಿರುವ ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ ಖಡ್ಸೆ ಅವರನ್ನು ಬೆಂಬಲಿಸಿ ಜಲಗಾಂವ್ ಮಹಾನಗರ ಪಾಲಿಕೆಯ 14 ಬಿಜೆಪಿ ಕಾರ್ಪೊರೇಟರ್‌ಗಳು ರಾಜೀನಾಮೆಗಳನ್ನು ಸಲ್ಲಿಸಿದ್ದಾರೆ.

ಜಲಗಾಂವ್ ಜಿಲ್ಲೆಯವರಾಗಿರುವ ಖಡ್ಸೆ 2014ರ ವಿಧಾನಸಭಾ ಚುನಾವಣೆಯಲ್ಲಿ ಮುಕ್ತಾಯಿ ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಕಾರ್ಪೊರೇಟರ್‌ಗಳು ರಾಜೀನಾಮೆಗಳನ್ನು ನೀಡಿರುವುದನ್ನು ಜಲಗಾಂವ್ ನಗರ ಬಿಜೆಪಿ ಅಧ್ಯಕ್ಷ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಸುರೇಶ್ ಭೋಲೆ ಅವರು ದೃಢಪಡಿಸಿದ್ದಾರೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷವು ಖಡ್ಸೆಯವರಿಗೆ ಸೂಚಿಸಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿ ಅವರು ರಾಜೀನಾಮೆಗಳನ್ನು ತನಗೆ ಸಲ್ಲಿಸಿದ್ದು, ತಾನು ಅವುಗಳನ್ನು ಪಕ್ಷದ ರಾಜ್ಯ ಘಟಕಕ್ಕೆ ಫ್ಯಾಕ್ಸ್ ಮಾಡಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News