ತರಕಾರಿ ವ್ಯಾಪಾರಿಗೆ ಲಾಟರಿ ಭಾಗ್ಯ : ಪ್ರಥಮ ಬಹುಮಾನ, ಇತರ ಒಂಬತ್ತು ಸಮಾಧಾನಕರ ಬಹುಮಾನಗಳು

Update: 2016-07-02 06:03 GMT

ಪುಚ್ಚಕ್ಕಲ್, ಜುಲೈ 2: ತರಕಾರಿ ವ್ಯಾಪಾರಿಗೆ ಕೇರಳ ಲಾಟರಿಯ ಭಾಗ್ಯ ಕಟಾಕ್ಷ, ಪ್ರಥಮಬಹುಮಾನ ಜೊತೆಗೆ ಒಂಬತ್ತು ಸಮಾಧಾನಕರ ಬಹುಮಾನ ಲಭಿಸಿದ ವಿನೂತ ಅದೃಷ್ಟವೊಂದು ಬಂದಪ್ಪಳಿಸಿದೆ. ಹಲವು ವರ್ಷಗಳಿಂದ ತೈಕೊಟ್ಟುಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವತೈಕೊಟ್ಟುಶ್ಶೇರಿ ಪಂಚಾಯತ್‌ನ ಐದನೆ ವಾರ್ಡ್‌ನ ಮಂಗತ್ ಮೋಹನನ್ ಪಿಳ್ಳೆ ಈ ಅದೃಷ್ಟ ಶಾಲಿಯಾಗಿದ್ದಾರೆ.ಕೇರಳ ಸರಕಾರದ ಶುಕ್ರವಾರದ ಲಾಟರಿ ಇವರಿಗೆ ಭಾಗ್ಯವನ್ನು ತೆರೆದು ಕೊಟ್ಟಿದೆ. ಬಿ.ಕೆ. 480090 ಎಂಬ ಟಿಕೆಟ್‌ಗೆ ಪ್ರಥಮ ಬಹುಮಾನ.ಇತರ ಸೀರಿಯಲ್‌ಗಳ ಇದೇ ನಂಬರ್‌ನ ಟಿಕೆಟ್‌ಗಳನ್ನೂ ಮೋಹನನ್ ಪಿಳ್ಳೆ ತೆಗೆದಿದ್ದರು. ಪೂಚ್ಚಕಲ್ ಮಹಾಲಕ್ಷ್ಮಿ ಲಕ್ಕಿ ಸೆಂಟರ್‌ನ ಬಹುಲ ಎಂಬಾತ ಮೋಹನನ್‌ಗೆ ಟಿಕೆಟ್‌ನ್ನು ಮಾರಿದ್ದರು.

ದಿನಾಲೂ ತುಂಬ ಟಿಕೆಟ್‌ಗಳನ್ನು ಪಿಳ್ಳೆ ತೆಗೆದುಕೊಳ್ಳುತ್ತಾರೆ. ಬಹುಮಾನದ ಮೊತ್ತದಿಂದ ಅಂಗಡಿಯ ಅಗತ್ಯಗಳಿಗೆ ಮಗಳ ಮದುವೆಗೆ ಮಾಡಿದ ಸಾಲಗಳನ್ನು ಪಾವತಿಸಲು ಅದ್ಯತೆ ಕೊಡುವೆ ಎಂದು ಪಿಳ್ಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News