ದಲಿತ ಯುವತಿ ದೇವಾಲಯ ಪ್ರವೇಶ: ಗಂಗಾಜಲದಿಂದ ಶುದ್ಧೀಕರಿಸಿದ ಅರ್ಚಕರು!

Update: 2016-07-15 06:23 GMT

ಕಾನ್ಪುರ,ಜುಲೈ 15: ದೇವಸ್ಥಾನಕ್ಕೆ ದಲಿತ ಯುವತಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ದೇವಸ್ಥಾನವನ್ನೇ ಗಂಗಾಜಲ ಹಾಕಿ ಶುದ್ಧೀಕರಿಸಿದ ಘಟನೆ ಉತ್ತರಪ್ರದೇಶದ ಮಂಗಲ್‌ಪುರ ಗ್ರಾಮದಿಂದ ವರದಿಯಾಗಿದೆ. ಈ ಕುರಿತು ಬಿತಾನಿ ದೇವಿ ಎಂಬ ದಲಿತ ಯುವತಿಚತುರ್ಭುಜ ದೇವಳದ ಪೂಜಾರಿಗಳ ವಿರುದ್ಧ ದೂರು ನೀಡಿದ್ದುಪೊಲೀಸರು ಪೂಜಾರಿಗಳನ್ನು ವಿಚಾರಿಸಿದ್ದಾರೆ.ಆದರೆ ಯುವತಿ ಕೇಸು ಬರೆದು ಕೊಟ್ಟಿಲ್ಲ ಎಂಬ ನೆಪ ಮುಂದೊಡ್ಡಿ ಪೊಲೀಸರು ಕೇಸು ದಾಖಲಿಸಿಲ್ಲ ಎಂದು ತಿಳಿದು ಬಂದಿದೆ.

ಈ ನಡುವೆ ದೇವಸ್ಥಾನದ ಪೂಜಾರಿಗಳು ದೇವಸ್ಥಾನದಲ್ಲಿ ಗಂಗಾಜಲದಿಂದ ಶುದ್ಧೀಕರಿಸುವ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯೇ ಈ ಯುವತಿ ಇನ್ನೊಬ್ಬ ಯುವತಿಯ ಜೊತೆಗೆ ದೇವಳಕ್ಕೆ ಪೂಜೆಗೆ ಬಂದಿದ್ದಳು. ಗಂಗಾಜಲ ಹಾಕಿ ಶುದ್ಧೀಕರಿಸುವುದು ದೇವಸ್ಥಾನದಲ್ಲಿ ಆಚರಣೆಯಲ್ಲಿರುವ ಸಂಪ್ರದಾಯವಾಗಿದೆ ಎಂದು ತಿಳಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News