ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಗುರುಪ್ರಸಾದ್ ಮಹಪಾತ್ರ ಅಧಿಕಾರ ಸ್ವೀಕಾರ

Update: 2016-07-19 17:48 GMT

ಮಂಗಳೂರು, ಜು.19: ಗುಜರಾತ್ ಕೇಡರ್‌ನ 1986ರ ಐಎಎಸ್ ಅಧಿಕಾರಿ ಡಾ.ಗುರುಪ್ರಸಾದ್ ಮಹಪಾತ್ರ ಜು.19ರಂದು ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

     ಈ ಹಿಂದೆ ಭಾರತ ಸರಕಾರದ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುವ ಡಾ.ಗುರುಪ್ರಸಾದ್ ಹೈದರಾಬಾದ್ ಪಾಲಿಕೆಯ ಕಮಿಶನರ್, ಸೂರತ್ ಪಾಲಿಕೆಯ ಕಮಿಶನರ್, ಗುಜರಾತ್‌ನ ಜಿಎಸಿಎಲ್‌ನ ಆಡಳಿತ ನಿರ್ದೇಶಕ, ಜಿಎನ್‌ಎಫ್‌ಸಿಯ ಆಡಳಿತ ನಿರ್ದೇಶಕ ಸೇರಿದಂತೆ ದೇಶದ ಇಂಧನ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News