ಭಾರೀ ಪೊಲೀಸ್ ಬಲ ನಿಯೋಜನೆ

Update: 2016-07-22 18:45 GMT

ಫಗ್ವಾರ, ಜು.22: ಖಡ್ಗ ಹಾಗೂ ಇತರ ಹರಿತ ಆಯುಧಗಳನ್ನು ಹಿಡಿದಿದ್ದ ಎರಡು ಸಮುದಾಯಗಳ ಸದಸ್ಯರು ಜಗಳವಾಡಿ ಪರಸ್ಪರರ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.

ಇಲ್ಲಿನ ಗೋಶಾಲಾ ರಸ್ತೆಯಲ್ಲಿ ಅವರು ಪ್ರತಿಭಟನಾ ಮೆರವಣಿಗೆ ನಡೆಸಿ ಪರಸ್ಪರ ಹೊಡೆದಾಡಿಕೊಂಡರು.

ಪಟ್ಟಣದಲ್ಲಿ ಅಹಿತಕರ ಘಟನೆ ತಡೆಯಲು ಭಾರೀ ಪೊಲೀಸ್ ಬಲವನ್ನು ನಿಯೋಜಿಸಲಾಗಿದೆ. ಜಲಂಧರ್ ವಲಯದ ಐಜಿ ಲೋಕನಾಥ ಅಂಗ್ರಾ, ಕಪುತಾಲದ ಜಿಲ್ಲಾಧಿಕಾರಿ ಜಸ್‌ಕಿರಣ್ ಸಿಂಗ್ ಹಾಗೂ ಎಸ್ಸೆಸ್ಪಿ ರಾಜಿಂದರ್ ಸಿಂಗ್ ಜಗಳವಾಡುತ್ತಿರುವ ಗುಂಪುಗಳನ್ನು ಸಮಾಧಾನಿಸಲು ಸ್ಥಳಕ್ಕೆ ಧಾವಿಸಿದ್ದಾರೆ.

ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿ, ತಮ್ಮ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆಂದು ಬಳಿಕ ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News