ಕಾಶ್ಮೀರ ಹಿಂಸಾಚಾರ: ಸಾವಿನ ಸಂಖ್ಯೆ 47ಕ್ಕೆ
Update: 2016-07-24 18:32 GMT
ಶ್ರೀನಗರ, ಜು.24: ಒಬ್ಬ ಕಾನ್ಸ್ಟೇಬಲ್ ಹಾಗೂ ಒಬ್ಬ ನಾಗರಿಕ ಇಂದು ಕೊನೆಯುಸಿರೆಳೆಯುವುದರೊಂದಿಗೆ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ 47ಕ್ಕೇರಿದೆ.
ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ಜು.15ರಂದು ಪೊಲೀಸ್ ಠಾಣೆಯ ಮೇಲೆ ದಾಳಿಯಲ್ಲಿ ಗಾಯಗೊಂಡಿದ್ದ ಕಾನ್ಸ್ಟೇಬಲ್ ಮುದಸಿರ್ ಅಹ್ಮದ್ ಎಂಬವರು ಇಂದು ಮುಂಜಾನೆ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.
ಪುಲಾಮದ ಪಾಂಪೋರ್ ಪ್ರದೇಶದ ನಾಗರಿಕ ಸಮೀರ್ ಅಹ್ಮದ್ವಾನಿ ಎಂಬವರು ಇಂದು ಸೆರಾದ ಸ್ಕಿಮ್ಸ್ ಆಸ್ಪತ್ರೆಯಲ್ಲಿ ಮೃತರಾದರೆಂದು ಅಧಿಕಾರಿಗಳು ತಿಳಿಸಿದ್ದಾರೆ.