ದುಬೈ-ಕಲ್ಲಿಕೋಟೆ ವಿಮಾನ ತುರ್ತು ಭೂಸ್ಪರ್ಶ

Update: 2016-07-28 17:30 GMT

ಮುಂಬೈ,ಜು.28: ದುಬೈನಿಂದ ಕಲ್ಲಿಕೋಟೆಗೆ ಪ್ರಯಾಣಿಸುತ್ತಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನದಲ್ಲಿ ಪ್ರಯಾಣಿಕನೊಬ್ಬ ಕಾಕ್‌ಪಿಟ್ ಒಳಗೆ ಪ್ರವೇಶಿಸಲು ಯತ್ನಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರ ನಡೆದಿದೆ.

 ಮುಂಬೈಯಲ್ಲಿ ವಿಮಾನ ಇಳಿಯುತ್ತಿದ್ದಂತೆಯೇ, ಸಿಐಎಸ್‌ಎಫ್ ಯೋಧರು ಕೂಡಲೇ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
 

ಸಿಐಎಸ್‌ಎಫ್ ಮೂಲಗಳ ಪ್ರಕಾರ,ವಿಮಾನವು ದುಬೈನಿಂದ ಹಾರಾಟ ಆರಂಭಿಸಿದ 30 ನಿಮಿಷಗಳ ಬಳಿಕ ಪ್ರಯಾಣಿಕನೊಬ್ಬ ಕೆಲವು ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ್ದ ಹಾಗೂ ವಿಮಾನದ ಕಾಕ್‌ಪಿಟ್‌ನೊಳಗೆ ನುಗ್ಗಲು ಯತ್ನಿಸಿದ್ದ. ಆಗ ಅತನ ಸಹೋದರ ಆತನನ್ನು ಹಿಡಿದಿಡಲು ಯತ್ನಿಸಿದ್ದನೆಂದು ಹೇಳಲಾಗುತ್ತಿದೆ. ವಿಮಾನದಲ್ಲಿ ದಾಂಧಲೆ ನಡೆಸಿದ ಪ್ರಯಾಣಿಕನು ಮಾನಸಿಕ ರೋಗಿಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News