ಅರವಿಂದ್ ಕೇಜ್ರಿವಾಲ್ ಇಂದಿನಿಂದ ಹಿಮಾಚಲದಲ್ಲಿ ಧ್ಯಾನಕ್ಕೆ!

Update: 2016-08-01 07:59 GMT

ಶಿಮ್ಲಾ,ಆಗಸ್ಟ್, 1: ದಿಲ್ಲಿಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಹಿಮಾಚಲಕ್ಕೆ ಧ್ಯಾನಕ್ಕಾಗಿ ತೆರಳಲಿದ್ದಾರೆ. ಇದಕ್ಕಾಗಿ ಅವರು ಸೋಮವಾರ ಹನ್ನೊಂದು ಗಂಟೆಗೆ ಕಾಂಗ್ಡಾ ವಿಮಾನನಿಲ್ದಾಣದಲ್ಲಿ ಬಂದು ಇಳಿಯಲಿದ್ದು ಧರ್ಮಕೋಟದ ಶಾಂತ್‌ವಾದಿಯದ ವಿಪಾಸನಾ ಕೇಂದ್ರದಲ್ಲಿ ಆಗಸ್ಟ್ ಒಂದರಿಂದ ಹನ್ನೆರಡರವರೆಗೆ ಧ್ಯಾನದಲ್ಲಿ ಕುಳಿತುಕೊಳ್ಳಲಿದ್ದಾರೆಂದು ವರದಿಯಾಗಿದೆ.

ಕೇಜ್ರಿವಾಲ್ ಧರ್ಮಶಾಲಾಕ್ಕೆ ಖಾಸಗಿ ಭೇಟಿ ನೀಡುತ್ತಿದ್ದು. ಆಮ್‌ಆದ್ಮಿ ನಾಯಕರನ್ನು ಕರೆದಿಲ್ಲ. ಕೇಜ್ರಿವಾಲ್ ಮುಖ್ಯಮಂತ್ರಿ ಆದ ಬಳಿಕ ಹಿಮಾಚಲಕ್ಕೆ ಮೊದಲ ಬಾರಿ ಭೇಟಿ ನೀಡುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News