ಸಂಸದೆ ಶಶಿಕಲಾ ಪುಷ್ಪ ವಿರುದ್ಧ ಯುವತಿಯರಿಂದ ದೂರು!

Update: 2016-08-09 11:16 GMT

  ಚೆನ್ನೈ, ಆ.9: ಡಿಎಂಕೆ ಸಂಸದರೊಬ್ಬರಿಗೆ ಕಪಾಳ ಮೋಕ್ಷ ನಡೆಸಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಅಣ್ಣಾಡಿಎಂಕೆಯಿಂದ ಹೊರದಬ್ಬಲಾದ ಸಂಸದೆ ಶಶಿಕಲಾಪುಷ್ಪರ ವಿರುದ್ಧ ಅಡುಗೆ ಕೆಲಸ ಸಹಾಯಕಿಯರಾದ ಇಬ್ಬರು ಯುವತಿಯರು ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಮನೆಕೆಲಸ ಮಾಡುವ ವೇಳೆ ಶಶಿಕಲಾ ಪುಷ್ಪ ನಮಗೆ ಹೊಡೆದಿದ್ದಾರೆ ಎಂದು ಕೆಲಸದಾಳುಗಳಾದ ಭಾನುಮತಿ, ಜಾನ್ಸಿ ರಾಣಿ ಎಂಬವರು ತೂತುಕುಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

 ಶಶಿಕಲಾರ ಪತಿ ಲಿಂಗೇಶ್ವರ ತಿಲಕನ್ ಮದ್ಯಪಾನ ಮಾಡಿ ತಮ್ಮನ್ನು ಥಳಿಸಿದ್ದಾರೆ, ಬಟ್ಟೆ ಹರಿದು ಹಾಕಲು ಪ್ರಯತ್ನಿಸಿದ್ದಾರೆ. ಶಶಿಕಲಾ ಪುತ್ರ ಪ್ರದೀಪ್ ರಾಜ ಕೂಡಾ ಹೊಡೆದಿದ್ದಾನೆ ಎಂದು ಈ ಇಬ್ಬರು ಅಡುಗೆ ಸಹಾಯಕಿಯರು ದೃಶ್ಯಮಾಧ್ಯಮಗಳಿಗೆ ತಿಳಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News