ಶಸ್ತ್ರಾಸ್ತ್ರ ಕಾಯ್ದೆಯನ್ವಯ ಅಸಾರಾಂ ಬಂಟನ ಬಂಧನ

Update: 2016-08-13 18:34 GMT

ಮುಝಫ್ಫರ್‌ನಗರ, ಆ.13: ಅತ್ಯಾಚಾರ ಪ್ರಕರಣವೊಂದರ ಸಾಕ್ಷಿಯೊಬ್ಬನ ಹತ್ಯೆಗೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಸ್ವಘೋಷಿತ ಸ್ವಾಮಿ ಅಸಾರಾಂ ಬಾಪುವಿನ ನಿಕಟ ಸಹಾಯಕನೊಬ್ಬನ ವಿರುದ್ಧ ಆಯುಧ ಕಾಯ್ದೆಯನ್ವಯ ಪ್ರಕರಣ ಹೂಡಲಾಗಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.

ಅಸಾರಾಂ ವಿರುದ್ಧದ ಅತ್ಯಾಚಾರ ಪ್ರಕರಣದ ಸಾಕ್ಷಿ ಅಖಿಲ್ ಗುಪ್ತಾ ಎಂಬಾತನ ಕೊಲೆ ಆರೋಪಿ ನೀರಜ್ ಕುಮಾರ್ ಎಂಬವರು ನೀಡಿದ ಮಾಹಿತಿಯಂತೆ ಪಿಸ್ತೂಲೊಂದನ್ನು ವಶಪಡಿಸಿಕೊಳ್ಳಲಾಗಿದೆಯೆಂದೂ ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಪ್ರಕರಣ ದಾಖಲಿಸಿ, ವಾರಂಟ್ ಜಾರಿಗೊಳಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಗುಪ್ತಾನನ್ನು 2015ರ ಜ.11ರಂದು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News